ಮಂಗಳೂರು : ನೂರಾರು ಕಾಂಗ್ರೆಸ್ ಕಾರ್ಯಕರ್ತರು ಬಂಟ್ವಾಳ ಕೊಳತಮಜಲ್ ನಿವಾಸಿ ಅಬ್ದುಲ್ ರಹಮಾನ್ ಹತ್ಯೆ ಬಳಿಕ ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ನೀಡಿದ್ದರು.
ಮಂಗಳೂರಿನ ಶಾದಿ ಮಹಲ್ ನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ನಮಗೆ ನ್ಯಾಯ ಬೇಕೆಂದು ಒತ್ತಾಯಪಡಿಸಿ ಈ ನಿರ್ಧಾರ ಕೈಗೊಂಡಿದ್ದರು.
ಈ ಸಾಮೂಹಿಕ ರಾಜೀನಾಮೆಯ ನೇತೃತ್ವವನ್ನು ವಹಿಸಿದ್ದ ಡಿಸಿಸಿ ಅಲ್ಪಸಂಖ್ಯಾತ ಕೋಶದ ಅಧ್ಯಕ್ಷರಾದ ಶಾಹುಲ್ ಹಮೀದ್ ಮತ್ತು ಮಾಜಿ ಕಾರ್ಪೊರೇಟರ್ ಆಶ್ರಫ್ ರವರಿಗೆ ಕಾಂಗ್ರೆಸ್ ನೋಟೀಸ್ ಕೊಟ್ಟಿದೆ.
ಡಿಸಿಸಿ ಅಧ್ಯಕ್ಷರಾದ ಕೆ ಹರೀಶ್ ಕುಮಾರ್ ಮಾತನಾಡಿ ' ಮಾನ್ಯ ಮುಖ್ಯಮಂತ್ರಿಯವರೇ ಶಾಹುಲ್ ರವರಿಗೆ ಕರೆ ಮಾಡಿ ರಾಜೀನಾಮೆ ನೀಡಬಾರದೆಂದು ಬೇಡಿಕೊಂಡಿದ್ದರು' ಎಂದರು
'ಮಾಧ್ಯಮಗಳ ಮುಂದೆ ನಿಮ್ಮ ರಾಜೀನಾಮೆಯ ಕ್ರಮವು ಪಕ್ಷಕ್ಕೆ ಮುಜುಗರ ತಂದಿದೆ. ಶಿಸ್ತು ಕ್ರಮ ಕೈಗೊಳ್ಳಬಾರದೇಕೆ ಎಂಬುದಕ್ಕೆ ಸೂಚನೆ ಕಳುಹಿಸಿದ ಏಳು ದಿನಗಳ ಒಳಗೆ ವಿವರಣೆ ನೀಡಬೇಕು' ಎಂದು ಕೆ ಹರೀಶ್ ತಿಳಿಸಿದ್ದಾರೆ.