ದಕ್ಷಿಣ ಕನ್ನಡ : ಜಿಲ್ಲೆಯಲ್ಲಿ ಇತ್ತೀಚಿನ ಕೆಲ ದಿನಗಳಿಂದ ಕೋಮು ಸಂಘರ್ಷಗಳು ನಡೆಯುತ್ತಿರುವ ಹಿನ್ನಲೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಸುಹಾಸ್ ಶೆಟ್ಟಿ ಮತ್ತು ಅಬ್ದುಲ್ ರಹಿಮಾನ್ ಹ*ತ್ಯೆ ನಂತರ ಜನರ ಆಕ್ರೋಶ ಮುಗಿಲು ಮುಟ್ಟಿತ್ತು. ತಕ್ಷಣ ಎಚ್ಚೆತ್ತ ರಾಜ್ಯ ಸರಕಾರ ಪೊಲೀಸ್ ಅಧಿಕಾರಿಗಳ ವರ್ಗಾವಣೆ ಮತ್ತು ಹೊಸ ಅಧಿಕಾರಿಗಳನ್ನು ನೇಮಕ ಮಾಡುವ ಮೂಲಕ ದಕ್ಷಿಣ ಕನ್ನಡವನ್ನು ಹತೋಟಿಗೆ ತರಲು ಪ್ರಯತ್ನಿಸುತ್ತಿದೆ.
ಇದರ ಭಾಗವಾಗಿ, ಪೊಲೀಸರು ಹೊಸ ಕ್ರಮವೊಂದನ್ನು ಜಾರಿಗೆ ತಂದಿದ್ದಾರೆ. ಜಿಲ್ಲೆಯಲ್ಲಿ ಕೋಮು ದ್ವೇಷ ಹರಡುವವರನ್ನು ಗಡಿಪಾರು ಮಾಡುವುದಾಗಿ ನೋಟೀಸ್ ಕಳುಹಿಸಿದೆ. ಈ ಪಟ್ಟಿಯಲ್ಲಿ ಹಿಂದೂ ಮುಖಂಡರು ಸೇರಿದಂತೆ ಮುಸ್ಲಿಂ ವ್ಯಕ್ತಿಗಳು ಸೇರಿಕೊಂಡಿದ್ದಾರೆ. ಪುತ್ತೂರಿನ ಪುತ್ತಿಲ ಪರಿವಾರದ ಸ್ಥಾಪನಾಧ್ಯಕ್ಷ, ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಹಾಗೂ ಸೌಜನ್ಯ ಪ್ರಕರಣದಲ್ಲಿ ಹೋರಾಡುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ಹೆಸರು ಕೂಡ ಸೇರಿಸಲಾಗಿದೆ.
ಪೊಲೀಸರು ಗಡಿಪಾರು ಮಾಡಲು 36 ಜನರ ಪಟ್ಟಿ ಈ ರೀತಿ ಇದೆ,
ಬಂಟ್ವಾಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯಿಂದ - 4 ಜನ
ಹೆಸರು: ಹುಸೈನಾರ್ (46), ಮೊಹಮ್ಮದ್ ಸಫಾನ್ (26), ರಾಜು ಅಲಿಯಾಸ್ ರಾಜೇಶ್ (35), ಮತ್ತು ಭುವಿ ಅಲಿಯಾಸ್ ಭುವಿತ್ ಶೆಟ್ಟಿ (35).
ಬಂಟ್ವಾಳ ಗ್ರಾಮಾಂತರ ಠಾಣೆ ವ್ಯಾಪ್ತಿಯಿಂದ - 6 ಜನ
ಹೆಸರು: ಪವನ್ ಕುಮಾರ್ (33), ಚರಣ್ ಅಲಿಯಾಸ್ ಚರಣ್ ರಾಜ್ (28), ಅಬ್ದುಲ್ ಲತೀಫ್ (40), ಮೊಹಮ್ಮದ್ ಅಶ್ರಫ್ (44), ಮೊಯ್ದಿನ್ ಅದ್ನಾನ್ ಅಲಿಯಾಸ್ ಅಡ್ಡು (24), ಮತ್ತು ಭರತ್ ರಾಜ್ ಬಿ ಅಲಿಯಾಸ್ ಭರತ್ ಕುಮೇಲು (38).
ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯಿಂದ - 3 ಜನ
ಹೆಸರು : ಗಣೇಶ್ ಅಲಿಯಾಸ್ ಗಣೇಶ್ ಪೂಜಾರಿ (35), ಅಬ್ದುಲ್ ಖಾದರ್ ಅಲಿಯಾಸ್ ಸೌಕತ್ (34), ಚಂದ್ರಹಾಸ್ (23).
ಪುಂಜಾಲಕಟ್ಟೆ ಠಾಣೆ ವ್ಯಾಪ್ತಿಯಿಂದ - 1 ಜನ
ಅಶ್ರಫ್ ಬಿ ಯಾನೆ ಗರಗಸ ಅಶ್ರಫ್ (43)
ಬೆಳ್ತಂಗಡಿ ಠಾಣೆ ವ್ಯಾಪ್ತಿಯಿಂದ - 2 ಜನ
ಹೆಸರು: ಮನೋಜ್ ಕುಮಾರ್ (37) ಮತ್ತು ಮಹೇಶ್ ಶೆಟ್ಟಿ ತಿಮರೋಡಿ (53).
ಪುತ್ತೂರು ನಗರ ಠಾಣೆ ವ್ಯಾಪ್ತಿಯಿಂದ - 6 ಜನ
ಹೆಸರು: ಹಕೀಂ ಕೂರ್ನಡ್ಕ ಅಲಿಯಾಸ್ ಅಬ್ದುಲ್ ಹಕೀಂ (38), ಅಜಿತ್ ರೈ (39), ಅರುಣ್ ಕುಮಾರ್ ಪುತ್ತಿಲ (54), ಮನೀಶ್ ಎಸ್ (34), ಅಬ್ದುಲ್ ರಹಿಮಾನ್ (38), ಮತ್ತು ಕೆ ಅಜೀಜ್ (48).
ಪುತ್ತೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಿಂದ - 3 ಜನ
ಹೆಸರು: ಕಿಶೋರ್ (34), ರಾಕೇಶ್ ಕೆ (30), ಮತ್ತು ನಿಶಾಂತ್ ಕುಮಾರ್ (22).
ಕಡಬ ಪೊಲೀಸ್ ಠಾಣೆ ವ್ಯಾಪ್ತಿಯಿಂದ - 1 ಜನ
ಹೆಸರು: ಮೊಹಮ್ಮದ್ ನವಾಝ್ (32).
ಉಪ್ಪಿನಂಗಡಿ ಠಾಣೆ ವ್ಯಾಪ್ತಿಯಿಂದ - 6 ಜನ
ಹೆಸರು: ಸಂತೋಷ್ ಕುಮಾರ್ ರೈ ಅಲಿಯಾಸ್ ಸಂತು ಅಡೆಕ್ಕಲ್ (35), ಜಯರಾಮ್ (25), ಶಂಸುದ್ದೀನ್ (36), ಸಂದೀಪ್ (24), ಮೊಹಮ್ಮದ್ ಶಾಕಿರ್ (35), ಮತ್ತು ಅಬ್ದುಲ್ ಅಜೀಜ್ ಅಲಿಯಾಸ್ ಕರಾಯ ಅಜೀಜ್ (36).
ಸುಳ್ಯ ಠಾಣೆ ವ್ಯಾಪ್ತಿಯಿಂದ - 2 ಜನ
ಹೆಸರು: ಲತೇಶ್ ಗುಂಡಿ (32) ಮತ್ತು ಮನೋಹರ್ ಅಲಿಯಾಸ್ ಮನು (40).
ಬೆಳ್ಳಾರೆ ಪೊಲೀಸ್ ಠಾಣೆ ವ್ಯಾಪ್ತಿಯಿಂದ - 2 ಜನ
ಹೆಸರು: ಪ್ರಸಾದ್ (35) ಮತ್ತು ಶಮೀರ್ ಕೆ (38).
ಈ ಎಲ್ಲಾ 36 ಜನರ ಗಡಿಪಾರು ಪಟ್ಟಿ ತಯಾರಾಗಿದ್ದು ಮುಂದಿನ ಪ್ರಕ್ರಿಯೆ ನಡೆಯುತ್ತಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.