20 June 2025 | Join group

ಕೆಲವರನ್ನು ಓಲೈಕೆ ಮಾಡುವ ಉದ್ದೇಶದಿಂದ ಹಿಂದೂ ಕಾರ್ಯಕರ್ತರ ಅರೆಸ್ಟ್ : ಬಿ. ವೈ. ವಿಜಯೇಂದ್ರ

  • 03 Jun 2025 09:50:34 PM

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯಿಂದ ನೀಡುತ್ತಿರುವ ಗಡಿಪಾರು ನೋಟೀಸ್ ಜಿಲ್ಲೆಯಲ್ಲಿ ಭಾರಿ ಸುದ್ದಿ ಮಾಡುತ್ತಿದೆ. ಬಿಜೆಪಿ ಮತ್ತು ಹಿಂದೂ ಮುಖಂಡರುಗಳು ಆಡಳಿತರೂಢ ಕಾಂಗ್ರೆಸ್ ಸರಕಾರದ ವಿರುದ್ದ ಕಿಡಿಕಾರುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜೇಯೇಂದ್ರ ಮಾತನಾಡಿ ಕಾಂಗ್ರೆಸ್ ಸರಕಾರ ಓಲೈಕೆ ನೀತಿ ಅನುಸರಿಸುತ್ತಿದೆ ಎಂದು ಆರೋಪ ಹೊರಿಸಿದ್ದಾರೆ.

 

ಅವರು ಮಾದ್ಯಮಗಳಿಗೆ ಉತ್ತರಿಸುತ್ತಾ, ಇತ್ತೀಚಿನ ದಿನಗಳಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹ*ತ್ಯೆಯಾಯಿತು. ತದನಂತರ ಮತ್ತೊಬ್ಬ ಮುಸಲ್ಮಾನನ(ಅಬ್ದುಲ್ ರಹಮಾನ್) ಹ*ತ್ಯೆಯೂ ಕೂಡ ಆಗಿದೆ. ಆದರೆ ಇದರ ನಡುವೆ ರಾಜ್ಯ ಸರಕಾರ ಆ ಪರಿಸ್ಥಿತಯನ್ನು ಸರಿಯಾಗಿ ನಿರ್ವಹಣೆ ಮಾಡುವುದಕ್ಕೆ ಸಾಧ್ಯ ಆಗದೆ, ಕಾನೂನು ಸುವ್ಯವಸ್ಥೆಯನ್ನು ಸರಿ ಪಡಿಸಬೇಕು ಅಂಥ ಹೇಳಿ ನೆಪ ಮಾಡಿಕೊಂಡು ಪೋಲಿಸ್ ಇಲಾಖೆ ಮತ್ತು ಪೊಲೀಸ್ ಅಧಿಕಾರಿಗಳಿಗೆ ಒತ್ತಡ ಹಾಕುತ್ತಿದ್ದರೆ ಎಂದು ಹೇಳಿದ್ದಾರೆ.

 

ಅಮಾಯಕ ಹಿಂದೂ ಕಾರ್ಯಕರ್ತರನ್ನು ಅರೆಸ್ಟ್ ಮಾಡುವಂತದ್ದು, ಹಿಂದೂ ಮುಖಂಡರ ಮೇಲೆ ಕೇಸು ಹಾಕುವಂತಹ ಒಂದು ರೀತಿಯ ಪ್ರಚೋದನೆ ಮಾಡುವಂತಹ ಕೆಲಸ ರಾಜ್ಯ ಸರಕಾರ ಪೊಲೀಸ್ ಇಲಾಖೆ ಮೂಲಕ ಕರಾವಳಿ ಭಾಗದಲ್ಲಿ ಮಾಡುತ್ತಾ ಇದೆ. ನಮ್ಮ ಪಕ್ಷದ ಕಾರ್ಯಕರ್ತರ ಮನೆಗೆ ಪೊಲೀಸರು ಮಧ್ಯರಾತ್ರಿ ಹೋಗಿ ಬಾಗಿಲು ತಟ್ಟಿ ವಿಚಾರಣೆ ಮಾಡುವಂತದ್ದು ಎಷ್ಟು ಸರಿ ಎಂದು ಸರಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.

 

ಎಲ್ಲೋ ಒಂದು ಕಡೆ ರಾಜ್ಯ ಸರಕಾರ ಕೆಲವರಿಗೆ ಖುಷಿ ಪಡಿಸುವ, ಕೆಲವರನ್ನು ಓಲೈಕೆ ಮಾಡಬೇಕೆನ್ನುವ ಉದ್ದೇಶದದಿಂದ ಹಿಂದೂ ಕಾರ್ಯಕರ್ತರ ಮೇಲೆ ಇವತ್ತು ಈ ರೀತಿ ಒಂದು ಬೆದರಿಕೆ ಒಡ್ಡುವ ಕೆಲಸ ನಿರಂತರ ಮಾಡುತ್ತಾರೆ. ನಾನು ರಾಜ್ಯದ ಮುಖ್ಯಮಂತ್ರಿಗಳಿಗೆ ಹಾಗೂ ಗೃಹಸಚಿವರಿಗೆ ಈ ಸಂದರ್ಭದಲ್ಲಿ ಹೇಳುವಂತದ್ದು ಇಷ್ಟೇನೆ ಕರಾವಳಿ ಭಾಗದಲ್ಲಿ ಶಾಂತಿ ಸುವ್ಯವೆಸ್ಥೆ ಕಾಪಾಡಬೇಕು ಎಂದು ಕೇಳಿಕೊಂಡರು.

 

ತಪ್ಪಿತ್ಥಸ್ಥರನ್ನು ಬಂಧಿಸಬೇಕು ಅದರ ನೆಪದಲ್ಲಿ ವಿನಃ ಕಾರಣ ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುವಂತದ್ದು ಖಂಡಿತ ಸರಿಯಲ್ಲ. ಈ ರೀತಿ ನಡುವಳಿಕೆಯಿಂದ ಯಾವುದೇ ಕಾರಣಕ್ಕೂ ವಾತಾವರಣ ತಿಳಿಯಾಗಲು ಸಾಧ್ಯವಾಗುವುದಿಲ್ಲ. ಬದಲಾಗಿ ವಾತಾವರಣ ಇನ್ನು ಕೂಡ ಹದಗೆಡುತ್ತದೆ. ಇದಕ್ಕೆ ರಾಜ್ಯ ಸರಕಾರವೇ ಹೊಣೆಯನ್ನು ತೆಗೆದುಕೊಳ್ಳಬೇಕಾಗುತ್ತದೆ.

 

ರಾಜ್ಯದ ಮುಖ್ಯಮಂತ್ರಿ ಹಾಗೂ ಗೃಹಸಚಿವರಲ್ಲಿ ಆಗ್ರಹ ಮಾಡುತ್ತೇನೆ, ಯಾರು ತಪ್ಪಿತಸ್ಥರಿದ್ದಾರೆ ಅವರನ್ನು ಹುಡುಕಿ ತನಿಖೆ ಮಾಡಿ, ಆದರೆ ಆ ನೆಪದಲ್ಲಿ ಹಿಂದೂ ಕಾರ್ಯಕರತರನ್ನು ಟಾರ್ಗೆಟ್ ಮಾಡಬೇಡಿ. ಪರಿವಾರದ ಮುಖಂಡರನ್ನು ಟಾರ್ಗೆಟ್ ಮಾಡಬೇಡಿ ಇಲ್ಲಾಂದ್ರೆ ಮುಂದಿನ ಬೆಳವಣಿಗೆಗೆ ರಾಜ್ಯ ಸರಕಾರವೇ ಹೊಣೆಯಾಗಲಿದೆ ಎಂಬ ಎಚ್ಚರಿಕೆ ನೀಡಿದ್ದಾರೆ.