ಬೆಂಗಳೂರು: RCB ತಂಡ ಮತ್ತು ಅಭಿಮಾನಿಗಳ ಹದಿನೆಂಟು ವರ್ಷಗಳ ಛಲದ ಹೋರಾಟಕ್ಕೆ ಮೇ 3ರ ರಾತ್ರಿ ಖುಷಿಯ ಕ್ಷಣ ದೊರಕಿತ್ತು. ಆದರೆ ಆ ಸಂತೋಷ ಕೇವಲ 18 ಗಂಟೆಗಳೂ ಉಳಿಯಲಿಲ್ಲ ಎಂಬುದು ದುರಂತವಾಗಿದೆ.
ಸಂಭ್ರಮಾಚರಣೆಯ ಹೊಣೆ ಹೊತ್ತಿದ್ದ ಕರ್ನಾಟಕ ಸರ್ಕಾರ, ವಿಧಾನಸೌಧದಲ್ಲಿ RCB ಆಟಗಾರರಿಗೆ ಸನ್ಮಾನ ಮಾಡುವಲ್ಲಿ ತೊಡಗಿತ್ತು. ಈ ನಡುವೆ, ಚಿನ್ನಸ್ವಾಮಿ ಕ್ರೀಡಾಂಗಣದ ಗೇಟುಗಳಲ್ಲಿ ನೂಕುನುಗ್ಗಲಿನಲ್ಲಿ ಜನರು ಪ್ರಾಣ ಕಳೆದುಕೊಂಡರು, ಮತ್ತು ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಆದರೆ ಈ ಮಧ್ಯೆ, ನಮ್ಮ ರಾಜ್ಯದ ಕೆಲ ಸಚಿವರುಗಳು ಮತ್ತು ಅವರ ಸಂಭಂದಿಕರು RCB ಆಟಗಾರರೊಂದಿಗೆ ವೇದಿಕೆಯಲ್ಲಿ ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ತೊಡಗಿದ್ದರೆ, ಜನರ ಜೀವಿತ ನಷ್ಟದ ಬಗ್ಗೆ ಅವರು ಯಾವುದೇ ತಾಳ್ಮೆಯ ಚಿಂತೆ ತೋರಿಸಲಿಲ್ಲ ಎಂಬುದಾಗಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬೆಂಗಳೂರು ನಗರದಲ್ಲಿಯೇ ನಡೆದ ಈ ದುರ್ಘಟನೆಯಲ್ಲಿ 11 ಜನರು ಮೃತಪಟ್ಟು, 50ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.