ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಪದೇ ಪದೇ ಬಂದು ಅಲ್ಲಿನ ಭಯೋತ್ಪಾದಕ ಮುಖಂಡರನ್ನು ನರಕಕ್ಕೆ ಕಳುಹಿಸುವ ಅಪರಿಚಿತ ವ್ಯಕ್ತಿ ಇನ್ನೂ ಪತ್ತೆಯಾಗಿಲ್ಲ. ಇಷ್ಟರಲ್ಲೇ ಹಲವಾರು ಭಯೋತ್ಪಾದಕ ಮುಖಂಡರನ್ನು ಮುಗಿಸಿದ ಈ ವ್ಯಕ್ತಿ, ಈಗ ಮತ್ತೊಂದು ಉಗ್ರ ಮುಖಂಡನನ್ನು ಹ*ತ್ಯೆ ಮಾಡುವ ಮೂಲಕ ಸುದ್ದಿಯಲ್ಲಿದ್ದಾನೆ.
ಈ ಹಿಂದೆ ಸಭಾ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರಿಗೆ ಬೆದರಿಕೆ ಹಾಕಿ ಭಾಷಣ ಮಾಡಿದ ಜೈಷ್ ಭಯೋತ್ಪಾದಕ ಅಬ್ದುಲ್ ಅಝೀಜ್ ಮೃತಪಟ್ಟಿದ್ದಾನೆ. ಜೈಷ್ ಮುಖಂಡ ಅಬ್ದುಲ್ ಅಝೀಜ್ ಬಹವಾಲ್ಪುರ್ ಪ್ರದೇಶದಲ್ಲಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾನೆ.
ಸದ್ಯಕ್ಕೆ ಪಾಕಿಸ್ತಾನದ ಎಲ್ಲಾ ಭಯೋತ್ಪಾದಕರು ಮತ್ತೊಮ್ಮೆ ಆಘಾತದಲ್ಲಿದ್ದರೆ. ಈ ಹಿಂದೆ ಅಬ್ದುಲ್ ಅಝೀಜ್ ಭಾರತವನ್ನು ಮುಗಿಸುವ ಬೆದರಿಕೆ ಹಾಕಿದ್ದ.
ಈತ ಹೃದಯಾಘಾತದಿಂದ ಮರಣ ಹೊಂದಿದ್ದಾನೆ ಎಂದು ಜೈಷ್ ಭಯೋತ್ಪಾದಕ ಸಂಘಟನೆ ತಿಳಿಸಿದರೆ, ಪಾಕಿಸ್ತಾನ ಪೊಲೀಸ್ ಸಂಪೂರ್ಣ ಸುಳಿವಿಲ್ಲದೆ ಗೊಂದಲದಲ್ಲಿದ್ದಾರೆ .