20 June 2025 | Join group

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತ ದುರಂತ ನೆನೆದು ಕಣ್ಣೀರಿಟ್ಟ ರಾಜ್ಯದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್

  • 05 Jun 2025 03:26:18 PM

ಬೆಂಗಳೂರು: ನಿನ್ನೆ ನಡೆದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಹೃದಯ ವಿದ್ರಾವಕ ಘಟನೆ ಬಗ್ಗೆ ಮಾತನಾಡಿದ ಡಿ ಕೆ ಶಿವಕುಮಾರ್, ‘ನಾವು ಆಡಳಿತಾತ್ಮಕ ಪಾಠ ಕಲಿಯಬೇಕು, ವಿರೋಧ ಪಕ್ಷಗಳು ಮೃತ ದೇಹಗಳ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ಅವರು ರಾಜಕೀಯ ಮಾಡಲಿ’ ಎಂದು ನುಡಿದರು. 

 

‘ವಿಪಕ್ಷಗಳು ಎಷ್ಟು ಮೃತ ದೇಹಗಳ ಮೇಲೆ ರಾಜಕೀಯ ಮಾಡಿದ್ದಾರೆಂದು ನಾನು ಪಟ್ಟಿ ಮಾಡಬಲ್ಲೆ ಎಂದು ವಿಪಕ್ಷಗಳನ್ನು ದೂರಿದರು. ನಾವು ಪರಿಸ್ಥಿತಿಯನ್ನು ಗಮನದಲ್ಲಿಇಟ್ಟುಕೊಂಡು ಕಾರ್ಯಕ್ರಮವನ್ನು 10 ನಿಮಿಷದಲ್ಲಿ ಮುಗಿಸಿದೆವು’ ಎಂದು ತಿಳಿಸಿದರು. 

 

ಚಿಕ್ಕ ಮಕ್ಕಳನ್ನು ನೋಡುವುದು ನೋವುಂಟು ಮಾಡುತ್ತದೆ. ಅವರ ನೋವನ್ನು ನಾನು ನೋಡಿದ್ದೇನೆ, ರಾಜ್ಯದಲ್ಲಿ ಇಂತಹ ಆಗುತ್ತದೆ ಎಂದು ನೀರಿಕ್ಷಿರಲಿಲ್ಲ' ಎಂದು ಕಣ್ಣೀರಿಟ್ಟರು. 

 

'ಮೃತರಲ್ಲಿ 15 ವರ್ಷದ ಬಾಲಕ ಇದ್ದುದನ್ನು ನಾನು ಕಣ್ಣಾರೆ ನೋಡಿದ್ದೇನೆ. 10 ಜನರ ಸಾವನ್ನು ನನ್ನ ಕಣ್ಣಿಂದಲೇ ನೋಡಿದ್ದೇನೆ, ಇಂತಹ ಸಾವು ಯಾವುದೇ ಕುಟುಂಬ ಸಹಿಸಲು ಸಾಧ್ಯವಿಲ್ಲ' ಎಂದು ಹೇಳುತ್ತಾ ಮಾಧ್ಯಮಗಳ ಕ್ಯಾಮರಾ ಮುಂದೆ ಬಿಕ್ಕಿ ಬಿಕ್ಕಿ ಅತ್ತರು. 

 

ನಿನ್ನೆಯ ಘೋರ ದುರಂತದಲ್ಲಿ 11 ಜನ ಮೃತಪಟ್ಟು, 50ಕ್ಕಿಂತಲೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಗಾಯಳುಗಳು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.