20 June 2025 | Join group

ಸಿಎಂ ನಿವಾಸ ಮತ್ತು ಪಾಸ್ ಪೋರ್ಟ್ ಕಚೇರಿಗೆ ಆತ್ಮಾಹುತಿ ಬಾಂಬ್ ಬೆದರಿಕೆ ಕರೆ

  • 07 Jun 2025 03:02:36 AM

ಬೆಂಗಳೂರು : ರಾಜಧಾನಿಯಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯರವರ ನಿವಾಸಕ್ಕೆ ಬಾಂಬ್ ಕರೆಯೊಂದು ಬಂದಿದೆ. ಅದರ ಜೊತೆಗೆ ಕೋರಮಂಗಲದಲ್ಲಿರುವ ಪಾಸ್ ಪೋರ್ಟ್ ಕಚೇರಿಗೂ ಕೂಡ ಆತ್ಮಾಹುತಿ ಬಾಂಬ್ ಬೆದರಿಕೆ ಬಂದಿದೆ ಎಂದು ವರದಿಯಾಗಿದೆ.

 

ಈ ಸಂದೇಶ ಇ-ಮೇಲ್ ಮೂಲಕ ಬಂದಿದ್ದು, ದೌಡಿ ಶಂಕರ ಜೀವಾಲ್ ಎಂದು ಅಕೌಂಟ್ ರಚಿಸಿ ಅದರ ಮೂಲಕ ಇಮೇಲ್ ಸಂದೇಶವನ್ನು ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮದ್ಯಾಹ್ನ 3.15 ಕ್ಕೆ ದಾಳಿ ನಡೆಸುವುದಾಗಿ ಇಮೇಲ್ ನಲ್ಲಿ ತಿಳಿಸಿಲಾಗಿದೆ.

 

ವಿವಾದಾತ್ಮಕ ತಮಿಳ್ ಯೂಟ್ಯುಬೆರ್ ಸವುಕ್ಕು ಶಂಕರ್ ಬಂಧನ ಮತ್ತು 26/11 ಭಯೋತ್ಪಾದಕ ಅಜ್ಮಲ್ ಕಸಬ್ ಮರಣದಂಡನೆಗೆ ಪ್ರತಿಕಾರವಾಗಿ ಈ ದಾಳಿ ನಡೆಸುವುದಾಗಿ ಉಲ್ಲೇಖಿಸಲಾಗಿದೆ.

 

ಆ ಕೂಡಲೇ ಸಿಎಂ ನಿವಾಸ ಮತ್ತು ಕೋರಮಂಗಳದ ಪಾಸ್ ಪೋರ್ಟ್ ಕಚೇರಿಗೆ ಬಾಂಬ್ ನಿಷ್ಕ್ರಿಯ ದಳ ಮತ್ತು ಪೊಲೀಸರು ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದ್ದಾರೆ. ತನಿಖೆ ಮುಂದುವರಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.