20 June 2025 | Join group

ಕಾರಿಂಜ ದೇವಸ್ಥಾನದ ಕೆರೆಗೆ ಬಿದ್ದು ವಿದ್ಯಾರ್ಥಿ ಸಾವು - ಕಾಲುಜಾರಿ ನಡೆದ ಅವಘಡ

  • 07 Jun 2025 11:25:06 AM

ಬಂಟ್ವಾಳ: ಪ್ರಸಿದ್ಧ ಕಾರಿಂಜ ದೇವಸ್ಥಾನದ ಗದಾ ತೀರ್ಥ ಕೆರೆಯಲ್ಲಿ ವಿದ್ಯಾರ್ಥಿಯೊಬ್ಬ ಕಾಲು ಜಾರಿ ಬಿದ್ದು ಮೃತ ಪಟ್ಟಿರುವುದು ವರದಿಯಾಗಿದೆ. ಕೆರೆಯಲ್ಲಿ ಕಾಲು ತೊಳೆಯಲು ಹೋದ ಸಂದರ್ಭದಲ್ಲಿ ಕಾಲು ಜಾರಿ ಈ ಅವಘಡ ಸಂಭವಿಸಿದೆ.

 

ಬಂಟ್ವಾಳ ತಾಲೂಕಿನ ವಗ್ಗ ಕಂಗಿತ್ತಿಲು ನಿವಾಸಿ ಶ್ರೀಧರ್ ಮೂಲ್ಯರವರ ಮಗ ಚೇತನ್ (19) ಮೃತಪಟ್ಟ ವಿದ್ಯಾರ್ಥಿ. ಜೂನ್ 7 ರ ಇಂದು ಬೆಳಗ್ಗಿನ ಜಾವಾ ಈ ಘಟನೆ ನಡೆದಿದ್ದು, ಈತ ಕಾರಿಂಜ ದೇವಸ್ಥಾನದ ಪರಮ ಭಕ್ತನಾಗಿದ್ದ.

 

ಚೇತನ್ ಬಂಟ್ವಾಳ ಬಿ. ಮೂಡ ಸರಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಯಾಗಿದ್ದು, ಪ್ರತಿ ಶನಿವಾರ ಕಾರಿಂಜ ದೇವಸ್ತಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಿದ್ದ. ಅದೇ ರೀತಿ ಇಂದು, ಜೂನ್ 07 ರಂದು ಕೂಡ ತನ್ನ ಸ್ನೇಹಿತ ಪ್ರಶ್ವಿತ್ ಜೊತೆ ಬಂದಿದ್ದು, ಕಾಲು ತೊಳೆಯಲೆಂದು ದೇವಸ್ಥಾನದ ಗದಾ ತೀರ್ಥ ಕೆರೆಗೆ ಹೋದ ಸಂದರ್ಭದಲ್ಲಿ ಕಾಲು ಜಾರಿ ಬಿದ್ದು ಪ್ರಾಣ ಬಿಟ್ಟಿದ್ದಾನೆ.

 

ಸ್ಥಳಿಯಲು ಸುದ್ದಿ ತಿಳಿದು ಕೆರೆಗೆ ಜಿಗಿದು ರಕ್ಷಿಸಲು ಪ್ರಯತ್ನ ಪಟ್ಟರು ಯಾವುದೇ ಪ್ರತಿಫಲವಾಗದೆ ವಿದ್ಯಾರ್ಥಿ ಕೆನೆಯುಸಿರೆಳೆದಿದ್ದಾನೆ. ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.