ಬಂಟ್ವಾಳ : ಇತ್ತೀಚಿಗೆ ಜೂನ್ 05 ರಂದು ಪಾಣೆಮಂಗಳೂರು ನೇತ್ರಾವತಿ ನದಿಯ ಪಕ್ಕದಲ್ಲಿದ್ದ ನೀರಿನ ಟ್ಯಾಂಕಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಪುತ್ತೂರು ನಗರಸಭೆಯ ಸದಸ್ಯ ನೆಲ್ಲಿಕಟ್ಟೆಯ ರಮೇಶ್ ರೈ (58) ಅವರ ಸಾ*ವಿನ ಹಿಂದೆ ಸಂಶಯದ ಹುತ್ತ ಹತ್ತಿಕೊಂಡಿದೆ.
ರಮೇಶ್ ರೈ ಯವರ ಮಗ ಬಂಟ್ವಾಳ ಠಾಣೆಯಲ್ಲಿ ಸಮಗ್ರ ತನಿಖೆಗೆ ಒತ್ತಾಯಿಸಿದ್ದು, ನನ್ನ ತಂದೆಯ ಆತ್ಮಹತ್ಯೆಯ ಹಿಂದೆ ಕಾಣದ ಕೈಗಳ ವ್ಯವಸ್ಥಿತ ಸಂಚು ಅಡಗಿದೆ ಎಂದು ಆರೋಪಿಸಲಾಗಿದೆ.
'ನನ್ನ ತಂದೆ ದೃಢ ಮನಸಿನವರಾಗಿದ್ದು, ಆತ್ಮಹತ್ಯೆ ಮಾಡಿಕೊಳುವರಷ್ಟು ದುರ್ಬಲವಾಗಿರಲಿಲ್ಲ. ಆದರೆ ಕೆಲ ದಿನಗಳ ಹಿಂದೆ ಹಲವಾರು ಬೆದರಿಕೆ ಕರೆಗಳು ಬರುತ್ತಿದ್ದು ಅವರು ತುಂಬಾ ನೊಂದುಕೊಂಡಿದ್ದರು ಎಂದು ಠಾಣೆಗೆ ತಿಳಿಸಿದ್ದಾರೆ. ಇದರ ಜೊತೆಗೆ ಒಂದು ಮೊಬೈಲ್ ನಂಬರ್ ಕೂಡ ಠಾಣೆಗೆ ನೀಡಿದ್ದು ಅದರ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಅವರು ತುಂಬಾ ಮಾನಸಿಕ ಒತ್ತಡದಲ್ಲಿದ್ದರು, ಅಂದು ಕೂಡ ಬೆಳಿಗ್ಗೆ 7 ಗಂಟೆಗೆ ಎಂದಿನಂತೆ ಮನೆಯಿಂದ ಹೊರಟಿದ್ದರು, ಸಂಜೆಯಾಗುವಷ್ಟರಲ್ಲಿ ಇಂತಹ ದುಃಖಕರ ಸಂದೇಶ ನಮಗೆ ತಲುಪಿದೆ ಎಂದಿದ್ದಾರೆ.
ರಮೇಶ್ ರೈ ಪಾಣೆಮಂಗಳೂರಿನ ನೇತ್ರಾವತಿ ಸೇತುವೆ ಪಕ್ಕದಲ್ಲಿದ್ದ ನೀರಿನ ಟ್ಯಾಂಕ್ ಗೆ ಹಾರಿ ತನ್ನ ಪ್ರಾಣವನ್ನು ಕಳೆದುಕೊಂಡಿದ್ದರು.
ಇದನ್ನೂ ಓದಿ: ಗುಂಡ್ಯದಲ್ಲಿ ಪುತ್ತೂರಿಗೆ ಬರುತ್ತಿದ್ದ ಖಾಸಗಿ ಬಸ್ ಪಲ್ಟಿ - ಹಲವರಿಗೆ ಗಾಯ