ಮಂಗಳೂರು : ಸುಹಾಸ್ ಶೆಟ್ಟಿ ಹ*ತ್ಯೆಗೆ ಬಜ್ಪೆಯ ಅಪಾರ್ಟ್ಮೆಂಟ್ ನಲ್ಲಿ ಕುಳಿತು ಸಂಚು ರೂಪಿಸಿದ್ದರು ಎನ್ನಲಾದ ವಸತಿ ಸಮುಚ್ಚಯಕ್ಕೆ ಮಂಗಳೂರು ಪೊಲೀಸ್ ಇಲಾಖೆಯಿಂದ ಎಚ್ಚರಿಕೆ ನೀಡಿದ್ದಾರೆ. ನಗರದ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅಪಾರ್ಟ್ಮೆಂಟ್ ನಲ್ಲಿ ಯಾವುದೇ ಅಕ್ರಮ ಚಟುವಟಿಕೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದ್ದಾರೆ.
ಈ ಅಪಾರ್ಟ್ಮೆಂಟ್ ನಲ್ಲಿ ಹಿಂದೆಯೂ ಈ ರೀತಿಯ ಅಪರಾಧ ಕೃತ್ಯಗಳಿಗೆ ಸಂಚು ರೂಪಿಸಿದ ಬಗ್ಗೆ ಪ್ರಕರಣ ದಾಖಲಾಗಿತ್ತು. ಪೊಲೀಸ್ ಇಲಾಖೆ ನೀಡದ ಹೇಳಿಕೆ ಪ್ರಕಾರ, ಅಪರಾಧ ಪ್ರಕರಣಗಳಲ್ಲಿ ಭಾಗಿಯಾದವರಿಗೆ ಆಶ್ರಯ ನೀಡಿ ರಕ್ಷಣೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಾಗುವುದು ಎಂಬ ಸೂಚನೆ ಮೇರೆಗೆ ಬಜ್ಪೆಯ ವಸತಿ ಸಮುಚ್ಚಯಕ್ಕೆ ಎಚ್ಚರಿಗೆ ನೀಡಿದ್ದಾರೆ.
ಪೊಲೀಸ್ ಇಲಾಖೆ ನೀಡಿದ ನಿರ್ದೇಶನಗಳು,
ಸಂದರ್ಶಕರ ಸಂಪೂರ್ಣ ಮಾಹಿತಿ ಪಡೆದ ನಂತರ ಒಳಗೆ ಬಿಡತಕ್ಕದ್ದು.
ಸಂದರ್ಶಕರ ಸಂಪೂರ್ಣ ವಿವರ ರಿಜಿಸ್ಟರ್ ಬುಕ್ ನಲ್ಲಿ ಖಡ್ಡಾಯವಾಗಿ ನಮೂದಿಸಬೇಕು.
ಭದ್ರತಾ ಸಿಬ್ಬಂದಿ ಸಂದರ್ಶಕರ ಮೊಬೈಲ್ ನಂಬರ್ ಗೆ ಕರೆ ಮಾಡಿ ಖಚಿತಪಡಿಸಿಕೊಳ್ಳಬೇಕು.
ದಿನದ 24*7 ಸಿಸಿಟಿವ್ ಚಿತ್ರೀಕರಣ ಮಾಡಬೇಕು ಮತ್ತು ಕನಿಷ್ಠ 30 ದಿವಸಗಳ ವಿಡಿಯೋ ಶೇಖರಣಾ ಸಾಮರ್ಥ್ಯವಿರಬೇಕು.
ಈ ಎಲ್ಲಾ ನಿಯಮಗಳನ್ನು ಖಡ್ಡಾಯವಾಗಿ ಪಾಲಿಸಬೇಕೆಂದು ಕಟುವಾದ ಎಚ್ಚರಿಕೆ ನೀಡಿದ್ದಾರೆ. ಸುಹಾಸ್ ಹ*ತ್ಯೆಯಾದ ಬೆನ್ನಲ್ಲೇ ಬಜ್ಪೆಯ ಅಪಾರ್ಟ್ಮೆಂಟ್ ನಲ್ಲಿ ನಡೆಯುವ ಅಕ್ರಮ ಚಟುವಟಿಗೆಗಳ ಬಗ್ಗೆ ಹಿಂದೂಪರ ಸಂಘಟನೆಗಳು ಆರೋಪ ಹೊರಿಸಿದ್ದವು.