20 June 2025 | Join group

ಅಮಾನತುಗೊಂಡ ಪೊಲೀಸ್ ಕಮೀಷನರ್ ಬಿ. ದಯಾನಂದ 35 ವರ್ಷಗಳಲ್ಲಿ ತೆಗೆದುಕೊಂಡ ರಜೆ ಎಷ್ಟು ಗೊತ್ತಾ? ಅವರ ಮಾತು ಕೇಳಿದರೆ ಬೇಸರ ಬರಿಸುತ್ತದೆ!

  • 08 Jun 2025 05:08:38 PM

ಮಂಗಳೂರು : ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡಿರುವ ಪೊಲೀಸ್ ಕಮಿಷನರ್ ಬಿ. ದಯಾನಂದರವರು ತನ್ನ 35 ವರ್ಷಗಳ ಅವಧಿಯಲ್ಲಿ ತೆಗೆದುಕೊಂಡಿರುವ ರಜೆ ಮತ್ತು ಇನ್ನಿತರ ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

 

ಸಂದರ್ಶನಕಾರರು ಕೇಳಿದ ಪ್ರಶ್ನೆ "ನೀವು ನಿಮ್ಮ 35 ವರ್ಷಗಳ ಪೊಲೀಸ್ ಸೇವೆಯ ಸಂದರ್ಭದಲ್ಲಿ ಎಷ್ಟು ರಜೆ ಪಡೆದಿದ್ದೀರಿ?" ಎಂಬ ಪ್ರಶ್ನೆಗೆ ಉತ್ತರಿಸುತ್ತಾ "35 ವರ್ಷಗಳಲ್ಲಿ ಒಂದು ದಿವಸವೂ ನಾನು ರಜೆ ಪಡೆದುಕೊಂಡಿಲ್ಲ" ಎನ್ನುವ ಮಾತು ರಾಜ್ಯದ ಜನತೆಯನ್ನು ದ್ವಿಗ್ರಮೆಗೊಳಿಸಿದೆ.

 

ಅಚ್ಚರಿಯೆಂದರೆ, ತನ್ನ ಮದುವೆಯ ನಿಶ್ಚಿತಾರ್ಥದ ದಿನವನ್ನೂ ಕೂಡ ಒಂದು ದಿವಸ ಮುಂದೂಡಬೇಕಾದ ಅನಿವಾರ್ಯತೆ ಬಂದೊದಗಿದ ಕಾರಣ ಅದನ್ನು ಕೂಡ ಒಪ್ಪಿಕೊಂಡು ತನ್ನ ಸೇವೆಯಲ್ಲಿ ನಿರತರಾಗಿದ್ದವರು. ಆ ಸಂದರ್ಭದಲ್ಲಿ ಮಂಗಳೂರಿನಲ್ಲಿ ಪರಿಸ್ಥಿತಿ ಹದಗೆಟ್ಟಿದ್ದರಿಂದ, ಅವರು ಮರಳಿ ಬೆಂಗಳೂರಿಗೆ ಪ್ರಯಾಣಿಸದೆ ತನ್ನ ನಿಗದಿಯಾದ ಮದುವೆ ನಿಶ್ಚಿತಾರ್ಥವನ್ನು ಒಂದು ದಿವಸದ ಮಟ್ಟಿಗೆ ಮುಂದೂಡಿಸಿದ್ದಾರಂತೆ.

 

ಮುಂದಕ್ಕೆ ಮಾತನಾಡಿದ ಕಮಿಷನರ್, "ನಾನು ನನ್ನ ಇಬ್ಬರು ಮಕ್ಕಳ ನಾಮಕರಣಕ್ಕೂ ಹೋಗಿಲ್ಲ" ಎಂಬ ಮಾತನ್ನು ಬಿಚ್ಚಿಟ್ಟಿದ್ದಾರೆ. ಇದೀಗ ಇವರ ಕೆಲಸ ಮೇಲೆ ಇದ್ದ ನಿಷ್ಠಾವಂತಿಕೆಯ ಹೇಳಿಕೆಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.

 

ನಿಷ್ಠಾವಂತ ಮತ್ತು ದಕ್ಷ ಅಧಿಕಾರಿ ಬಿ. ದಯಾನಂದ್ ರವರ ವೃತ್ತಿ ಜೀವನದಲ್ಲಿ ಕಪ್ಪುಚುಕ್ಕೆ ಈ ಅಮಾನತು. ಒಂದು ದಿನವೂ ರಜೆ ತೆಗೆದುಕೊಳ್ಳದೆ, ಪ್ರಾಮಾಣಿಕ ಸೇವೆ ಸಲ್ಲಿಸಿದ ಇಂತಹ ಅಧಿಕಾರಿಯ ಅಮಾನತು ಖಂಡನೀಯ ಎಂದು ರಾಜ್ಯದ ಜನತೆ ಕೋಪ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ರಾಜ್ಯದ ಕೆಲವೆಡೆ ಪ್ರತಿಭಟನೆಗಳು ಶುರುವಾಗಿದೆ.