ಮಂಗಳೂರು: ಸುಹಾಸ್ ಶೆಟ್ಟಿ ಹ*ತ್ಯೆ ಪ್ರಕರಣವನ್ನು ಎನ್ಐಎ ಗೆ ಒಪ್ಪಿಸಬೇಕೆಂಬ ಒತ್ತಾಯಕ್ಕೆ ಕೇಂದ್ರ ಸರಕಾರ ಗ್ರೀನ್ ಸಿಗ್ನಲ್ ನೀಡಿದೆ. ರಾಜ್ಯದ ಬಿಜೆಪಿ ಮುಖಂಡರು ರಾಜ್ಯ ಸರಕಾರಕ್ಕೆ ಹಲವು ರೀತಿಯಲ್ಲಿ ಬೇಡಿಕೆ ಇಟ್ಟರೂ, ರಾಜ್ಯ ಸರಕಾರ ಈ ಪ್ರಕರಣವನ್ನು ನಿಭಾಯಿಸಲು ರಾಜ್ಯದ ಪೊಲೀಸರಿಗೆ ಸಾಮರ್ಥ್ಯವಿದೆ ಎಂದು ಹೇಳಿತ್ತು.
ಇದೀಗ ಈ ಪ್ರಕರಣವನ್ನು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಎನ್ಐಎ ಗೆ ಹಸ್ತಾಂತರಿಸಲು ಒಪ್ಪಿಕೊಂಡಿದ್ದು, ಇನ್ನು ಮುಂದೆ ಎನ್ಐಎ ತಂಡ ಈ ಪ್ರಕರಣವನ್ನು ಭೇದಿಸುವ ಕೆಲಸ ಮಾಡಲಿದೆ. ಈಗಾಗಲೇ 12 ಜನರನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದರು.
ಈ ವಿಚಾರವಾಗಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬೃಜೇಶ್ ಚೌಟ 'ಸುಹಾಸ್ ಶೆಟ್ಟಿ ಹ*ತ್ಯೆಯ ತನಿಖೆಯನ್ನು NIA ಗೆ ಹಸ್ತಾಂತರಿಸಿದ್ದಕ್ಕಾಗಿ ಕೇಂದ್ರ ಗೃಹ ಸಚಿವರಾದ ಶ್ರೀ Amit Shah ಅವರಿಗೆ ಧನ್ಯವಾದಗಳು..
ನಿಷೇಧಿತ PFI ಸಂಘಟನೆಯ ಕಾರ್ಯಕರ್ತರು ಈಗ ಎಸ್ಡಿಪಿಐ ನ ಕಾರ್ಯಕರ್ತರಾಗಿ ತಮ್ಮ ಚಟುವಟಿಕೆಗಳನ್ನು ಮುಂದುವರೆಸಿದ್ದು ಇಂತಹ ದೇಶ ವಿರೋಧಿ ಶಕ್ತಿಗಳನ್ನು ಕಿತ್ತುಹಾಕುವಂತೆ ಹ*ತ್ಯೆ ನಡೆದ ತಕ್ಷಣ ಕೇಳಿಕೊಂಡಿದ್ದೆನು..
ದಕ್ಷಿಣ ಕನ್ನಡದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ವಿಕಸಿತ ಭಾರತದ ಸಂಕಲ್ಪವನ್ನು ಸಾಕಾರಗೊಳಿಸುವಲ್ಲಿ ನಾವುಗಳು ಸಕ್ರಿಯವಾಗಿ ಪಾಲ್ಗೊಳ್ಳಲು ಇಂತಹ ಅಂಶಗಳನ್ನು ಬುಡ ಸಮೇತ ಕಿತ್ತು ಹಾಕುವುದು ಅತ್ಯಗತ್ಯ..' ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದು ಅಭಿನಂದನೆ ಸಲ್ಲಿಸಿದ್ದಾರೆ.