20 June 2025 | Join group

ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇದ, ದಿನ ನಿಗದಿ: ಸಚಿವರ ನಿರ್ದೇಶನ

  • 10 Jun 2025 10:21:24 AM

ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಬರುವ ದೇವಾಲಯಗಳಲ್ಲಿ ಪ್ಲಾಸ್ಟಿಕ್ ಚೀಲಗಳನ್ನು ಉಪಯೋಗಿಸದೆ ಇರಲು ರಾಜ್ಯ ಸರಕಾರ ನಿರ್ಧಾರ ಕೈಗೊಂಡಿದೆ.

 

ಕರ್ನಾಟಕ ದತ್ತಿ ಸಚಿವರಾದ ರಾಮಲಿಂಗ ರೆಡ್ಡಿ ಮಾತನಾಡಿ 'ಆಗಸ್ಟ್ 15 ರಿಂದ ಪ್ಲಾಸ್ಟಿಕ್ ಮುಕ್ತ ದೇವಾಲಯ ಮಾಡುತ್ತಿದ್ದೇವೆ . ದೇವಸ್ಥಾನದಲ್ಲಿ ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಬಳಕೆ ಮಾಡಬಾರದು' ಎಂದು ಸೂಚಿಸಿದ್ದಾರೆ.

 

ಈ ಆದೇಶ ಜಾರಿಗೆ 2 ತಿಂಗಳ ಸಮಯ ಕೊಡಲಾಗಿದ್ದು, ಈಗಾಗಲೇ ಪ್ಲಾಸ್ಟಿಕ್ ವಸ್ತುಗಳನ್ನು ಖರೀದಿ ಮಾಡಿದ್ದಾರೆ ಅದನ್ನು ಬಳಕೆ ಮಾಡಬಹುದು ಆದರೆ ಆಗಸ್ಟ್ 15 ರ ನಂತರ ಯಾವುದೇ ಕಾರಣಕ್ಕೂ ದೇವಸ್ಥಾನ ಮತ್ತು ದೇವಸ್ಥಾನ ಸುತ್ತಮುತ್ತ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇದ ಎಂದು ತಿಳಿಸಿದ್ದಾರೆ.

 

ನೀರಿನ ಬಾಟಲಿ ಸೇರಿದಂತೆ ಎಲ್ಲಾ ಪ್ಲಾಸ್ಟಿಕ್ ಬಾಟಲಿ ಬಳಕೆಯನ್ನು ನಿಷೇದಿಸಲಾಗುತ್ತದೆ. ಇದರ ಜೊತೆಗೆ ಸಚಿವರು ದೇವಸ್ಥಾನದ ಅಸ್ತಿ, ಅರ್ಚಕರ ವೇತನ, ಅರ್ಚಕರ ಮಕ್ಕಳ ವಿದ್ಯಾರ್ಥಿ ವೇತನ ಹಾಗೆ ಇನ್ನಿತರ ವಿಚಾರಗಳ ಬಗ್ಗೆ ಪ್ರಸ್ತಾಪ ಮಾಡಿದರು.