ಮಂಡ್ಯ: ಮಂಡ್ಯ ಜಿಲ್ಲೆಯ ಪಾಂಡವಪುರ ಚಿನಕುರುಳಿಯಲ್ಲಿ ಹೋಟೆಲ್ ಮಾಲೀಕನೊಬ್ಬ ಬಿರಿಯಾನಿಯಲ್ಲಿ ನಾಯಿ ಮಾಂಸ ಬೆರಿಸಿ ಜನರಿಗೆ ತಿನ್ನಿಸಿದ್ದಾನೆ ಎಂಬ ಆರೋಪದ ಹಿನ್ನಲೆಯಲ್ಲಿ ಸಾರ್ವಜನಿಕರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಮದೀನಾ ಎಂಬ ಹೋಟೆಲ್ ಮಾಲೀಕ ಅಜಾದ್ ಈ ಕೃತ್ಯ ಎಸೆದ ಆರೋಪಿಯಾಗಿದ್ದು, ನಾಯಿ ಮಾಂಸ ಸಮೇತ ಹಿಡಿದು ಸ್ಥಳೀಯರು ಅಜಾದ್ ಗೆ ಬುದ್ದಿ ಕಳಿಸಿದ್ದಾರೆ. ಈ ಹಿಂದೆ ಬಹಳಷ್ಟು ಬಾರಿ ಈ ಕೃತ್ಯ ಎಸಗಿದ್ದು, ಸ್ಥಳೀಯರು ಸಂಶಯಗೊಂಡು ಪರಿಶೀಲನೆ ನಡೆಸಿದಾಗ ನಾಯಿಯ ಮಾಂಸ ಪತ್ತೆಯಾಗಿತ್ತು.
ಊರಿನ ಜನರು ಒಟ್ಟು ಸೇರಿ ಆರೋಪಿ ಅಜಾದ್ ಗೆ ಧರ್ಮದೇಟು ನೀಡಿ ಆಮೇಲೆ ಪೊಲೀಸರಿಗೆ ತಿಳಿಸಿದ್ದಾರೆ. ಪಾಂಡವಪುರ ಟೌನ್ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.