ಜೂನ್ 12ರ ಮದ್ಯಾಹ್ನ, ಗುಜರಾತಿನ ಅಹಮದಾಬಾದ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಓರ್ವ ವ್ಯಕ್ತಿ ಬದುಕುಳಿದಿರುವ ಪವಾಡ ಸಂಭವಿಸಿದೆ.
ಅಪಘಾತದ ಸ್ಥಿತಿಯನ್ನು ನೋಡಿದರೆ ಯಾರೂ ಬದುಕುಳಿಯಲು ಸಾಧ್ಯವೇನೂ ಇಲ್ಲ ಎಂಬಂತಿತ್ತು. ಆದರೆ ರಮೇಶ್ ವಿಶ್ವಾಸ್ ಕುಮಾರ್ ಎಂಬ ವ್ಯಕ್ತಿ ಸಾವನ್ನು ಜಯಿಸಿ ಬದುಕು ಮರಳಿ ಬಂದಿದ್ದಾರೆ.
ವಿಶೇಷವೆಂದರೆ, ಗುಜರಾತದ ಮಾಜಿ ಮುಖ್ಯಮಂತ್ರಿ ವಿಜಯ ರೂಪಾಣಿ ಅವರು 12A ಸೀಟಿನಲ್ಲಿ ಕುಳಿತಿದ್ದರೆ, ಪವಾಡ ಸದೃಷ್ಟ ವಿಶ್ವಾಸ್ ಕುಮಾರ್ ರಮೇಶ್ ಅವರ ಸೀಟ್ ಸಂಖ್ಯೆ 11A ಆಗಿತ್ತು.
ರಮೇಶ್ ವಿಶ್ವಾಸ್ ಕುಮಾರ್ ಬ್ರಿಟಿಷ್ ಪಾಸ್ಪೋರ್ಟ್ ಹೊಂದಿರುವವರು. ಅವರು ಈ ಕುರಿತು ಮಾತನಾಡುತ್ತಾ, “ಟೇಕ್ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ ವಿಮಾನ ನೆಲಕ್ಕೆ ಬಿದ್ದಿತು. ನನ್ನ ಸುತ್ತಮುತ್ತ ಎಲ್ಲರೂ ಬಿದ್ದಿದ್ದರು. ವಿಮಾನದ ತುಣುಕುಗಳು ನನ್ನ ಮೇಲೆ ಬಿದ್ದಿದ್ದವು,” ಎಂದು ಹೆದರುವ ಅನುಭವವನ್ನು ಹಂಚಿಕೊಂಡಿದ್ದಾರೆ.