20 June 2025 | Join group

ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ರಾಜ್ಯದ್ಯಂತ ಪ್ರತಿಭಟನೆ: ದಿನ ನಿಗದಿ

  • 15 Jun 2025 02:51:41 AM

ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ಮಾಡಲು ನಿರ್ಧರಿಸಿದೆ ಮತ್ತು ದಿನಾಂಕ ಕೂಡ ನಿಗದಿಯಾಗಿದೆ.

 

ರಾಜ್ಯ ಸರಕಾರದ ವಿರುದ್ಧ ಈಗಾಗಲೇ ಬಿಜೆಪಿ ಮುಖಂಡರು ಹರಿಹಾಯ್ದಿದ್ದು ರಾಜ್ಯ ಸರಕಾರದ ಯೋಜನೆ ಮತ್ತು ಇತ್ತೀಚಿಗೆ ನಡೆದ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರತಿಭಟನೆಯ ಮುಖ್ಯ ಅಜೆಂಡಾ ಆಗಲಿದೆ ಎನ್ನಲಾಗಿದೆ.

 

ಆರ್ ಸಿ ಬಿ ತಂಡದ ವಿಜಯೋತ್ಸವ ಸಂದರ್ಭದಲ್ಲಿ 11 ಜನ ಕಾಲ್ತುಳಿತಕ್ಕೆ ಸಾವನಪ್ಪಿದ ಪ್ರಕರಣವನ್ನು ಖಂಡಿಸಿ ಇದೇ ಜೂನ್ 16 ಮತ್ತು 17 ರಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ನಡೆಸಲಿದೆ.

 

ಈ ಪ್ರತಿಭಟನೆಯು ಜೂನ್ 13 ರಂದು ನಿಗದಿಯಾಗಿತ್ತು ಆದರೆ ಅಹಮದಾಬಾದ್ ವಿಮಾನ ದುರಂತದಿಂದ ಮುಂದಕ್ಕೆ ಹಾಕಲಾಯಿತು.