ಅಹ್ಮದಾಬಾದ್ ನಲ್ಲಿ ನಡೆದ ಭೀಕರ ವಿಮಾನ ಅಪಘಾತ… ಸುಟ್ಟುಹೋದ ದೇಹಗಳು… ಬದುಕುಳಿಯುವ ಭರವಸೆಯೇ ಇಲ್ಲದ ದೃಶ್ಯ. ಆದರೆ ಒಂದು ಪವಾಡ ನಡೆದಿವೆ. ಭಾರತ ಕಂಡ ಭಯಾನಕ ಏರ್ ಇಂಡಿಯಾ 171 ದುರಂತದಲ್ಲಿ ಎಲ್ಲರೂ ಸಾವಿಗೀಡಾದರೆಂದು ಭಾವಿಸುತ್ತಿದ್ದ ಸಂದರ್ಭದಲ್ಲಿ ವಿಶ್ವಾಸ್ ಕುಮಾರ್ ಎಂಬ ಒಬ್ಬ ವ್ಯಕ್ತಿ ಮಾತ್ರ ಬದುಕುಳಿದಿದ್ದರು — ಅವರು ಕುಳಿತಿದ್ದ ಸ್ಥಳ: ಸೀಟ್ 11A.
ಅಂದು ನಡೆದಿತ್ತು 1998ರ ಥಾಯ್ ಏರ್ವೇಸ್ ಅಪಘಾತ. ಅದರಲ್ಲಿ ಜೀವದಿಂದ ಪಾರಾದ ಗಾಯಕ ರುವಾಂಗ್ಸಾಕ್ ಜೇಮ್ಸ್ ಲಾಯ್ಚುಸಾಕ್ ಕೂಡಾ ಸೀಟ್ 11A ಯಲ್ಲೇ ಕುಳಿತಿದ್ದವರು! ಇದೀಗ ಥಾಯ್ ಗಾಯಕ ಲಾಯ್ಚುಸಾಕ್ , ತಮ್ಮ ಅನುಭವವನ್ನು ಹಂಚಿಕೊಂಡು – “ಅವರು(ವಿಶ್ವಾಸ್ ಕುಮಾರ್) ಕೂಡಾ ನಾನಂತೆ 11A ಯಲ್ಲೇ ಕುಳಿತಿದ್ದರು!” ಎಂದು ಹೇಳಿರುವುದು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೃತ್ತಾಂತದಂತೆಯೇ ಹರಡುತ್ತಿದೆ.
ಈ ಎರಡು ಭೀಕರ ವಿಮಾನ ಅಪಘಾತಗಳಲ್ಲಿ ಬದುಕುಳಿದವರು ಒಂದೇ ಸೀಟ್ ಸಂಖ್ಯೆ ಹೊಂದಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಈಗ ಇದನ್ನು “ಪವಾಡ ಸೀಟ್ 11A” ಎಂದು ಕರೆಯಲಾಗುತ್ತಿದೆ. ಅಪಘಾತದ ತಕ್ಷಣವೇ, ತುರ್ತು ನಿರ್ಗಮನ ಬಾಗಿಲು ಬಳಸಿ ವಿಶ್ವಾಸ್ ಕುಮಾರ್ ವಿಮಾನದಿಂದ ಹೊರಬಂದರು ಎಂಬ ಪ್ರಾಥಮಿಕ ವರದಿಗಳು ಬಂದಿದೆ.
ಅವರು ಕುಳಿತಿದ್ದ ಭಾಗವೇ ಮುರಿದು ಬೇರೆಡೆಗೆ ಬಿದ್ದಿದ್ದು, ಅವರ ಜೀವ ಉಳಿಯಲು ಸಹಾಯ ಮಾಡಿದೆ. ಅವರು ಬೆಂಕಿಯಂತ ಚೆಂಡಿನ ಒಳಗಡೆಯಿಂದ ಹಾರಿ ಹೊರಗೆ ಬಂದು ತನ್ನ ಜೀವ ಉಳಿಸಿದರು. ಬಹಳ ದೊಡ್ಡ ಪವಾಡವೇ ನಡೆದು ಹೋಯಿತು. ಉಳಿದ ಎಲ್ಲಾ ಪ್ರಯಾಣಿಕರು ಸುಟ್ಟು ಕರಕಲಾದರು.
ಮೂಲಗಳ ಪ್ರಕಾರ, ವಿಮಾನದ ಎಮರ್ಜೆನ್ಸಿ ಬಾಗಿಲಿನ ಹತ್ತಿರ ಇರುವ 11A ಸೀಟ್ ಗೆ ಈಗ ಭಾರಿ ಡಿಮ್ಯಾಂಡ್ ಆಗಿದೆಯಂತೆ. ಪ್ರತಿಯೊಬ್ಬರೂ 11A ಸೀಟ್ ಉಪಯೋಗಿಸಲು ಬಯಸುತ್ತಾರಂತೆ. ಒಟ್ಟಿನಲ್ಲಿ ವಿಮಾನದ 11A ಪವಾಡ ಸೀಟ್ ಅಥವಾ ಅದೃಷ್ಟದ ಸೀಟ್ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.