20 June 2025 | Join group

ದಿನವಿಡೀ ಸುರಿದ ಮಳೆ: ಸೂರಿಕುಮೇರ್ ಹತ್ತಿರದ ದಾಸಕೋಡಿಯ ಮನೆಗೆ ನೀರು ನುಗ್ಗಿ ಅರ್ಧಕ್ಕೂ ಹೆಚ್ಚು ಮುಳುಗಡೆ

  • 16 Jun 2025 12:00:58 AM

ಬಂಟ್ವಾಳ: ಬಾಳ್ತಿಲ ಗ್ರಾಮದ ದಾಸಕೋಡಿಯ ಗಣೇಶ್ ಕುಲಾಲ್ ಅವರ ಮನೆಗೆ ದಿನವಿಡೀ ಸುರಿದ ಭಾರಿ ಮಳೆಯಿಂದ ನೀರು ನುಗ್ಗಿದ್ದು, ಮನೆ ಅರ್ಧಕ್ಕಿಂತ ಹೆಚ್ಚು ಭಾಗ ಮುಳುಗಡೆಯಾಗಿದೆ.

 

ಮನೆಯ ಜೊತೆಗೇ ಸುತ್ತಮುತ್ತಲಿನ ತೋಟಗಳಿಗೂ ನೀರು ನುಗ್ಗಿದೆ. ಈ ತಗ್ಗು ಪ್ರದೇಶದಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ, ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ಈ ಭಾಗದಲ್ಲಿ ನೀರು ಸರಿಯಾಗಿ ಹರಿಯದೇ, ಮನೆಯ ಸುತ್ತ ಆವೃತ್ತವಾಗಿದೆ.

 

ಮಳೆಯ ಪ್ರಮಾಣ ಹೆಚ್ಚಾಗುತ್ತಿದ್ದಂತೆ ನೀರು ಮತ್ತಷ್ಟು ಜಮೆಯಾಗುತ್ತಿರುವ ಕಾರಣ, ಹತ್ತಿರದ ಇತರ ಮನೆಗಳಿಗೆ ನೀರು ನುಗ್ಗುವ ಭೀತಿ ಕೂಡ ಉಂಟಾಗಿದೆ. ಈ ಪ್ರದೇಶ ರಾಷ್ಟ್ರೀಯ ಹೆದ್ದಾರಿಯಗಿಂತ ಬಹಳ ಕೆಳಮಟ್ಟದಲ್ಲಿರುವುದರಿಂದ, ಮಳೆನೀರು ಇಲ್ಲಿ ಸಂಗ್ರಹವಾಗುತ್ತಿದೆ.

 

ಸದ್ಯ ಈ ಮನೆಯಲ್ಲಿ ಯಾರು ವಾಸವಿಲ್ಲದಿರುವುದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಮಳೆಯ ಪ್ರಮಾಣ ಇನ್ನಷ್ಟು ಹೆಚ್ಚಾದರೆ ಮನೆ ಸಂಪೂರ್ಣವಾಗಿ ಮುಳುಗುವ ಸಾಧ್ಯತೆ ಇದೆ.