19 June 2025 | Join group

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಎತ್ತಂಗಡಿ: ಹೊಸ ಅಧಿಕಾರಿಗಳ ನೇಮಕ

  • 17 Jun 2025 10:48:40 PM

ಕರ್ನಾಟಕ ಸರಕಾರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜಿಲ್ಲಾಧಿಕಾರಿಗಳನ್ನು(ಡಿಸಿ) ಎತ್ತಂಗಡಿ ಮಾಡಿ ಆದೇಶ ಹೊರಡಿಸಿದ್ದು, ಹೊಸ ಜಿಲ್ಲಾಧಿಕಾರಿಗಳನ್ನು ನೇಮಿಸಿದ್ದಾರೆ.

 

ಬೆಂಗಳೂರಿನ ವಾಣಿಜ್ಯ ತೆರಿಗೆ (ಸೇವಾ ವಿಶ್ಲೇಷಣಾ ವಿಭಾಗ) ದ ಹೆಚ್ಚುವರಿ ಆಯುಕ್ತರಾಗಿದ್ದ ದರ್ಶನ್ ಎಚ್ ವಿ ಅವರನ್ನು ನೇಮಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಉಪ ಆಯುಕ್ತ ಮುಲ್ಲೈ ಮುಹಿಲನ್ ಎಂ ಪಿ ಅವರನ್ನು ಬೆಂಗಳೂರಿನ ಇನ್ಸ್‌ಪೆಕ್ಟರ್ ಜನರಲ್ ಆಫ್ ನೋಂದಣಿ ಮತ್ತು ಅಂಚೆಚೀಟಿಗಳ ಆಯುಕ್ತರನ್ನಾಗಿ ನೇಮಿಸಲಾಗಿದೆ.

 

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಇ-ಆಡಳಿತ ನಿರ್ದೇಶಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಸ್ವರೂಪ ಟಿ ಕೆ, ಐಎಎಸ್ (2012) ಅವರನ್ನು ಉಡುಪಿಯ ಹೊಸ ಉಪ ಆಯುಕ್ತರನ್ನಾಗಿ ನೇಮಿಸಲಾಗಿದೆ. ಈಗಿನ ವಿದ್ಯಾಕುಮಾರಿ ಕೆ, ಐಎಎಸ್ ಅವರನ್ನು ಡಿಸಿ ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ.

 

ಹೊಸದಾಗಿ ನೇಮಕಗೊಂಡ ಅಧಿಕಾರಿಗಳು ತಕ್ಷಣವೇ ಸೇವೆಗೆ ಹಾಜರಾಗುವಂತೆ ಸರಕಾರ ಆದೇಶ ಹೊರಡಿಸಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ವೇಗವಾಗಿ ಬೆಳೆಯುವ ಜಿಲ್ಲೆಗಳಾಗಿದ್ದು ಆದಷ್ಟು ಬೇಗ ಹೊಸದಾಗಿ ನೇಮಕವಾದ ಅಧಿಕಾರಿಗಳು ಶೀಘ್ರವೇ ಅಧಿಕಾರ ವಹಿಸುವ ನೀರಿಕ್ಷೆಯಿದೆ.