20 June 2025 | Join group

ಬಂಟ್ವಾಳ ಕಂಬಳ ಜಾತಿ, ಧರ್ಮ, ಮತ ಎಲ್ಲವನ್ನೂ ಮೀರಿದ ಸೌಹಾರ್ದದ ಕಂಬಳ : ಬಿ. ರಮಾನಾಥ ರೈ

  • 08 Mar 2025 03:41:31 PM

ಬಂಟ್ವಾಳ, ಮಾರ್ಚ್ 08, 2025 : ಬಂಟ್ವಾಳ ತಾಲೂಕಿನ ನಾವೂರ ಗ್ರಾಮದ ಕೂಡಿಬೈಲಿನಲ್ಲಿ 14 ನೇ ವರ್ಷದ ಮುಡೂರು - ಪಡೂರು ಜೋಡುಕರೆ ಕಂಬಳಕ್ಕೆ ಇಂದು ಬೆಳಗ್ಗೆ 8.00 ಗಂಟೆಗೆ ಮಾಜಿ ಸಚಿವ ಹಾಗೂ ಬಂಟ್ವಾಳ ಕಂಬಳದ ಗೌರವಾಧ್ಯಕ್ಷರಾದ ಶ್ರೀ ಬಿ. ರಮಾನಾಥ ರೈ ಹಾಗೂ ಸೇರಿದ ಎಲ್ಲಾ ಗಣ್ಯರ ಸಮುಖದಲ್ಲಿ ಚಾಲನೆ ನೀಡಲಾಯಿತು.

 

ದಿವಂಗತ ಆಲ್ಬರ್ಟ್ ಪಾಯ್ಸ್ ಕೂಡಿಬೈಲು ವೇದಿಕೆಯಲ್ಲಿ ಉದ್ಘಾಟನಾ ಸಮಾರಂಭ ನಡೆಯಿತು. ಕರ್ನಾಟಕ ಆರ್ಯ ಈಡಿಗ ಮಹಾ ಸಂಸ್ಥಾನದ ಪೀಠಾಧಿಪತಿ ಸೋಲೂರಿನ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಅಲ್ಲಿಪಾದೆ ಸಂತ ಅಂಥೋನಿ ಚರ್ಚಿನ ಧರ್ಮಗುರು ರಾಬರ್ಟ್ ಡಿಸೋಜಾ ಮತ್ತು ಅಳದಂಗಡಿ ಅರಮನೆಯ ತಿಮ್ಮಣ್ಣರಸ ಡಾ. ಪದ್ಮ ಪ್ರಸಾದ್ ಅಜಿಲ ಕಂಬಳದ ಉದ್ಘಾಟನೆಯನ್ನು ನೆರವೇರಿಸಿದ್ದರು. ಈ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಬಿ. ರಮಾನಾಥ ರೈ ವಹಿಸಿದ್ದರು.

 

ಆಗ್ರಾರ್ ಚರ್ಚ್ ಧರ್ಮಗುರು ಡಾ. ಪೀಟರ್ ಡಿಸೋಜಾ, ಬಂಟ್ವಾಳ ಪುರ ಸಭಾಧ್ಯಕ್ಷ ವಾಸು ಪೂಜಾರಿ, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಿ.ಎಚ್. ಖಾದರ್, ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್. ಪರ್ಲ ವೆಲಂಕಣಿ ಚರ್ಚ್ ಧರ್ಮಗುರು ಮಾರ್ಕ್ ಅರುಣ್ ಡಿಸೋಜಾ, ಬುಡಾ ಅಧ್ಯಕ್ಷ ಬೇಬಿ ಕುಂದರ್, ಬಂಟ್ವಾಳ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ಆರ್. ಪೂಜಾರಿ, ನಮ್ಮ ಕುಡ್ಲ ವಾಹಿನಿಯ ನಿರ್ದೇಶಕ ಲಿಲೇಶ್ ಆರ್. ಕರ್ಕೇರ ಹಾಗೂ ಇನ್ನಿತರು ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದರು.

 

ಬಂಟ್ವಾಳ ಕಂಬಳದ ಅಧ್ಯಕ್ಷರಾಗಿರುವ ಯುಸ್ ಎಲ್ ರೋಡ್ರಿಗಸ್, ಕಾರ್ಯಾಧ್ಯಕ್ಷರಾದ ಚಂದ್ರ ಪ್ರಕಾಶ ಶೆಟ್ಟಿ ತುಂಬೆ, ಪದ್ಮಶೇಖರ್ ಜೈನ್, ಎಡ್ತೂರು ರಾಜೀವ ಶೆಟ್ಟಿ, ಫಿಲಿಪ್ ಫ್ರ್ಯಾಂಕ್ ಇನ್ನಿತರು ಉಪಸ್ಥಿತರಿದ್ದರು.

 

14ನೇ ವರ್ಷದ ಅದ್ದೂರಿ ಬಂಟ್ವಾಳ ಕಂಬಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮನದ ನೀರಿಕ್ಷೆ : ಕಾರ್ಯಕರ್ತರಲ್ಲಿ ಉಮ್ಮಸ್ಸು