20 June 2025 | Join group

ಕಾಲ್ತುಳಿತ ತಡೆಗೆ ಹೊಸ ಕಾನೂನು ಜಾರಿ : ತಪ್ಪಿತ್ಥಸ್ಥರಿಗೆ ಜೈಲು ಮತ್ತು ಭಾರೀ ದಂಡ!

  • 20 Jun 2025 02:47:42 PM

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಆರ್ ಸಿ ಬಿ ತಂಡದ ವಿಜಯೋತ್ಸವ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಪ್ರಕರಣದ ನಂತರ ಎಚ್ಚೆತ್ತಿರುವ ರಾಜ್ಯ ಸರಕಾರ ಇದೀಗ ಹೊಸ ಕಾನೂನನ್ನು ರಚಿಸಿದೆ. ಈ ಸಂಬಂಧ ಸಚಿವ ಸಂಪುಟದಲ್ಲಿ ಜನಸಂದಣಿ ನಿಯಂತ್ರಣ ಮಸೂದೆಯ ಬಗ್ಗೆ ಚರ್ಚಿಸಲಾಗಿದೆ.

 

ಮುಂದಿನ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಇದರ ಬಗ್ಗೆ ಅಂತಿಮ ಅನುಮೋದನೆಯಾಗಲಿದೆ. ಈ ಕಾನೂನಿನ ಪ್ರಕಾರ ಕಾರ್ಯಕ್ರಮ ಸಂಘಟಕರು ಕಾರ್ಯಕ್ರಮ ನಡೆಸುವ ವ್ಯಾಪ್ತಿಯ ಪೊಲೀಸ್ ಇಲಾಖೆಯಲ್ಲಿ ಅನುಮತಿ ಪಡೆದು ಮುಂದುವರಿಯತಕ್ಕದ್ದು.

 

ಪೊಲೀಸ್ ಇಲಾಖೆ ಕಾರ್ಯಕ್ರಮ ನಡೆಸಲು ಅನುಮತಿ ಕೊಡಬಹುದು, ಸ್ಥಳವನ್ನು ಬದಲಾಯಿಸಬಹುದು, ಸಮಯ ಬದಲಾಯಿಸಬಹುದು ಅಥವಾ ರದ್ದು ಮಾಡುವ ಹಕ್ಕನ್ನು ಹೊಂದಿರುತ್ತಾರೆ.

 

ಈ ಮಸೂದೆಯು ಜಾತ್ರೆ, ರಥೋತ್ಸವ, ಪಲ್ಲಕಿ, ಉತ್ಸವ, ತೆಪ್ಪದ ತೇರು, ಕ್ರಿಸ್ಮಸ್, ಉರುಸ್ ಮತ್ತು ಇನ್ನಿತರ ಯಾವುದೇ ಧಾರ್ಮಿಕ ಕಾರ್ಯಕ್ರಮಗಳಿಗೆ ಅನ್ವಯವಾಗುವುದಿಲ್ಲ.

 

ಕಾರ್ಯಕ್ರಮಕ್ಕೆ ಮುನ್ನ ಅಥವಾ ಕಾರ್ಯಕ್ರಮ ನಡೆಸುವಾಗ ಜನರನ್ನು ನಿಯಂತ್ರಿಸಲಾಗದ ಪಕ್ಷದಲ್ಲಿ ಆಯೋಜಕರಿಗೆ 3 ವರ್ಷದ ತನಕ ಜೈಲು ಶಿಕ್ಷೆ ಮತ್ತು 5 ಲಕ್ಷ ರೂ. ದಂಡವನ್ನು ವಿಧಿಸಬಹುದಾಗಿದೆ ಎಂದು ಕಾಲ್ತುಳಿತ ತಡೆ ಮಸೂದೆಯನಲ್ಲಿ ನಮೂದಿಸಲಾಗಿದೆ.