21 June 2025 | Join group

ರೂ. 500 ಲಂಚ ಪಡೆದಿದ್ದ ನಿವೃತ ಅಧಿಕಾರಿಗೆ 30 ವರ್ಷಗಳ ಬಳಿಕ ಜೈಲು ಶಿಕ್ಷೆ : ದೂರುದಾರ 5 ವರ್ಷದ ಹಿಂದೆಯೇ ಮೃತ

  • 21 Jun 2025 01:48:34 AM

ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದ ರೈತ ಲಕ್ಷ್ಮಣ ರುಕ್ಕಣ್ಣ ಕಟಾಂಬಳೆ ಎಂಬವರು 1995 ರಲ್ಲಿ ತಮ್ಮ ಜಾಗದ ಉತಾರ ಕೊಡಲು ಗ್ರಾಮ ಪಂಚಾಯತ್ ಗೆ ಅರ್ಜಿ ಸಲ್ಲಿಸಿದ್ದರು. ಆ ಸಂದರ್ಭದಲ್ಲಿ ಅಂದಿನ ಗ್ರಾಮ ಲೆಕ್ಕಾಧಿಕಾರಿ ನಾಗೇಶ್ ದೊಂಡು ಶಿವಂಗೇಕರ್‌ 500 ರೂ ಲಂಚ ಕೇಳಿದ್ದರಂತೆ.

 

ಇದರ ಬಗ್ಗೆ ರೈತ ಲಕ್ಷ್ಮಣ ರುಕ್ಕಣ್ಣ ಕಟಾಂಬಳೆ ಲೋಕಾಯುಕ್ತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಲಂಚ ಪಡೆಯುವ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು.

 

2006ರಲ್ಲಿ ಈ ಕೇಸಿನಲ್ಲಿ ಆರೋಪಿ ನಾಗೇಶ್ ದೊಂಡು ಶಿವಂಗೇಕರ್‌ ರವರಿಗೆ ಹೈ ಕೋರ್ಟ್ 1 ವರ್ಷ ಜೈಲು ಮತ್ತು ರೂ 1,000 ದಂಡವನ್ನು ವಿಧಿಸಿತ್ತು.

 

ಇದೀಗ ನಾಗೇಶ್ ರವರ ಈ ಪ್ರಕರಣವನ್ನು ಸುಪ್ರೀಮ್ ಕೋರ್ಟ್ ಪರಿಶೀಲಿಸಿ, ತಪ್ಪಿತಸ್ಥ ನಾಗೇಶ್ ರನ್ನು ಮತ್ತೊಮ್ಮೆ ಜೈಲಿಗೆ ಕಳುಹಿಸಿದೆ. ಒಬ್ಬ ಆರೋಪಿಗೆ ಲಂಚಕ್ಕೆ ಸಂಬಂಧಪಟ್ಟ ತೀರ್ಪು ಬರಲು 30 ವರ್ಷ ತೆಗೆದುಕೊಂಡಿರುವುದು ಜನತೆಯಲ್ಲಿ ದಿಗ್ರಮೆ ಉಂಟುಮಾಡಿದೆ.