20 June 2025 | Join group

ಮಹಾ ಶಿವರಾತ್ರಿಯಂದು ಧರ್ಮಸ್ಥಳಕ್ಕೆ ಪಾದಯಾತ್ರೆ ಮಾಡುವ ಭಕ್ತರಿಗಾಗಿ ವಿಶೇಷ ಸೂಚನೆಗಳು:

  • 11 Feb 2025 12:08:40 AM

 ಈ ಚಿತ್ರವು ಕೇವಲ ವಿವರಣಾ ಉದ್ದೇಶಕ್ಕಾಗಿ ಮಾತ್ರ.

Dharmastala : ಮಹಾ ಶಿವರಾತ್ರಿಗೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ಈ ಶುಭ ಪರ್ವದಲ್ಲಿ ಭಕ್ತಾದಿಗಳು ರಾಜ್ಯದಾದ್ಯಂತ ದೇವಸ್ಥಾನ ಭೇಟಿ ಕೊಡುಹುದು ಸರ್ವೇ ಸಾಮಾನ್ಯ. ಧರ್ಮಸ್ಥಳ ಮಂಜುನಾಥ ಸ್ವಾಮಿ ಕ್ಷೇತ್ರಕ್ಕೆ ಪ್ರತಿವರ್ಷ ಶಿವರಾತ್ರಿಯಂದು ಲಕ್ಷಾಂತರ ಭಕ್ತಾದಿಗಳು ದೇವರ ದರ್ಶನ ಮಾಡಲು ಹೋಗುತ್ತಾರೆ. ರಾಜ್ಯದ ವಿವಿಧ ಮೂಲೆಗಳಿಂದ ಧರ್ಮಸ್ಥಳಕ್ಕೆ ಭೇಟಿ ಕೊಡುವವರಿದ್ದಾರೆ. ಇದರಲ್ಲೂ ಪಾದಯಾತ್ರೆ ಮುಖಾಂತರ ಹೋಗುವ ಭಕ್ತರು ಬಹಳಷ್ಟು.

 

ಪಾದಯಾತ್ರೆ ಮುಖಾಂತರ ಭಕ್ತಾದಿಗಳು ಪ್ರತಿ ವರ್ಷ ಧರ್ಮಸ್ಥಳ ಕ್ಷೇತ್ರಕ್ಕೆ ಮಹಾ ಶಿವರಾತ್ರಿಯಂದು ಹೋಗುವುದು ಪರಂಪರೆಯಿಂದಲು ನಡೆಯುತ್ತಿದೆ. ಈ ಪುಣ್ಯದ ಕ್ಷೇತ್ರಕ್ಕೆ ಹೋಗುವ ಭಕ್ತಾದಿಗಳು ಸುರಕ್ಷಿತವಾಗಿ ದೇವರ ದರ್ಶನ ಮಾಡಲು ಕೆಲವು ಸೂಚನೆಗಳನ್ನು ಪ್ರತಿ ವರ್ಷದಂತೆ ಈ ವರ್ಷವೂ ಜಾರಿಗೊಳಿಸಲಾಗಿದೆ.

 

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬರುವ ಭಕ್ತಾದಿಗಳಿಗೆ ಈ ಕೆಳಗಿನ ಸಲಹೆ ಸೂಚನೆಗಳನ್ನು ನೀಡಲಾಗಿದೆ:

* ಪಾದಯಾತ್ರಿಗಳು ಕಡ್ಡಾಯವಾಗಿ ರಸ್ತೆ ಬಲಬದಿಯಲ್ಲೇ ಚಲಿಸಬೇಕು .

* ಪಾದಯಾತ್ರೆಯಲ್ಲಿ ಬರುವವರು ಶಿವ ಪಂಚಾಕ್ಷರಿ ಮಂತ್ರ ಪಠಿಸುತ್ತ ಬರಬೇಕು.

* ಭಕ್ತಾದಿಗಳು ಕಡ್ಡಾಯವಾಗಿ ಉಡುಪು ಬಟ್ಟೆಯ ಬೆನ್ನಿನಲ್ಲಿ, ತೋಳಿನಲ್ಲಿ, ತಲೆಯ ದಿರಿಸಿನಲ್ಲಿ ಪ್ರತಿಫಲಕ ಅಂದರೆ ರೆಫ್ಲೆಕ್ಟರ್ ಇರಬೇಕು. ಇದನ್ನು ಕಡ್ಡಾಯವಾಗಿ ಧರಿಸತಕದ್ದು.

* ನೀವು ದಾರಿಯಲ್ಲಿ ಬರುವಾಗ ಅಥವಾ ವಾಸ್ತವ್ಯ ಇರುವ ಸ್ಥಳದಲ್ಲಿ ಉಗುಳುಹುದು ಅಥವಾ ಯಾವುದೇ ರೀತಿಯ ಗಲೀಜು ಕಡ್ಡಾಯವಾಗಿ ಮಾಡಬಾರದು. 

* ತಂಗುವ ಸ್ಥಳ, ಅಡುಗೆ ಮಾಡಿದ ಸ್ಥಳವನ್ನು ಚೆನ್ನಾಗಿ ಸ್ವಯಂಸ್ಫೂರ್ತಿಯಿಂದ ಸ್ವಚ್ಛ ಮಾಡಬೇಕು.

* ನೀವು ಬಳಸುವ ಪ್ಲಾಸ್ಟಿಕ್ ಮತ್ತು ಕಸ-ಕಡ್ಡಿಗಳನ್ನು ಚೀಲಗಳಲ್ಲಿ ತುಂಬಿ ತ್ಯಾಜ ವಿಲೇವಾರಿಗೆ ಇರುವ ನಿಗದಿತ ಸ್ಥಳದಲ್ಲೇ ವಿಲೇವಾರಿ ಮಾಡಬೇಕು.

* ಪಾದಯಾತ್ರಿಗಳು ಏಕಬಳಕೆಯ ನೀರಿನ ಪ್ಲಾಸ್ಟಿಕ್ ಬಾಟಲಿಗಳನ್ನು ಉಪಯೋಗಿಸಬೇಕು, ದಾರಿಯುದ್ದಕ್ಕೂ ವಿವಿಧೆಡೆ ಲಭ್ಯವಿರುವ ಕುಡಿಯುವ ನೀರನ್ನು ತುಂಬಿಸಿಕೊಂಡು ಮರುಬಳಕೆ ಮಾಡಬೇಕು ಇದರಿಂದ ಪ್ಲಾಸ್ಟಿಕ್ ತ್ಯಾಜ ಕೂಡ ಕಡಿಮೆಯಾಗುತ್ತದೆ. 

 

ಶಾಸಕ ಎಸ್. ಸುರೇಶ್ ಕುಮಾರ್ ಕೂಡ ತಮ್ಮ ಫೇಸ್ಬುಕ್ ಪೋಸ್ಟ್ ನಲ್ಲಿ ಈ ಸೂಚನೆಗಳನ್ನು ಹಾಕಿದ್ದಾರೆ. ಎಲ್ಲಾ ನಿಯಮಗಳನ್ನು ಪಾಲಿಸುವುದರಿಂದ ಪಾದಯಾತ್ರಿಗಳಿಗೆ ಸುರಕ್ಷಿತವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತಲುಪಿ, ದೇವರ ದರ್ಶನ ಯಾವುದೇ ಅಡಚಡೆ ಇಲ್ಲದೆ ನಡೆಯಲಿದೆ.

 

ತಮ್ಮ ಸುತ್ತ ಮುತ್ತ ಕಸಗಳನ್ನು ಬಿಸಾಡದೆ, ನಾವು ತಂಗುವ ಸ್ಥಳಗಳನ್ನು ಸ್ವಚ್ಛತೆಯಿಂದ ಇಡುವುದರಿಂದ ತಮಗೆ ಮತ್ತು ಬರುವ ಎಲ್ಲಾ ಭಕ್ತಾದಿಗಳಿಗೆ ಸ್ವಚ್ಛವಾದ ವಾತಾವರಣ ಇರಲಿದೆ.

 

ಪ್ರತಿವರ್ಷವೂ ಭಕ್ತಾದಿಗಳು ದೂರದ ಊರುಗಳಾದ ಬೆಂಗಳೂರು, ಮೈಸೂರ್, ಮಡಿಕೇರಿ, ಶಿವಮೊಗ್ಗ, ಹಾಸನ, ದಾವಣಕೆರೆ ಮತ್ತು ಹಲವು ಉತ್ತರ ಭಾರತದ ಭಕ್ತರು ಬಹಳ ದಿನಗಳಷ್ಟು ನಡೆದುಕೊಂಡು ಶಿವಜಪ ಮಾಡಿಕೊಂಡು ಹಲವಾರು ಮೈಲುಗಳಿಂದ ಧರ್ಮಸ್ಥಳಕ್ಕೆ ಮಹಾ ಶಿವರಾತ್ರಿಯಂದು ತಲುಪುತ್ತಾರೆ.

 

ಭಕ್ತಾದಿಗಳು ಮೊದಲೇ ತಮ್ಮ ನೋಂದಣಿ ಮಾಡಿಕೊಂಡಿರುತ್ತಾರೆ ಮತ್ತು ಅವರಿಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ದೇವಸ್ಥಾನದ ಕಮಿಟಿ ವ್ಯವಸ್ಥೆ ಮಾಡಿಕೊಡುತ್ತದೆ. ಜೊತೆಗೆ ಕೆಲ ವೈದ್ಯಕೀಯ ತಂಡ ಕೂಡ ಕಾರ್ಯನಿರತದಲ್ಲಿರುತ್ತದೆ.