20 June 2025 | Join group

ಬಂಟ್ವಾಳದ ಕರಿಯಂಗಳದಲ್ಲಿ ಭೀಕರ ಬೆಂಕಿ ಅವಘಡ : ಮಧ್ಯರಾತ್ರಿ ಶಾಸಕರ ದೌಡು.! ಸಂಪೂರ್ಣ ವರದಿ

  • 11 Feb 2025 01:44:24 PM

Bantwal : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಬಡಕಬೈಲ್ ಜಂಕ್ಷನ್ ಬಳಿ ಫೆಬ್ರವರಿ 10, ಸೋಮವಾರದಂದು ರಾತ್ರಿ ಭೀಕರ ಬೆಂಕಿ ಅವಘಡ ಸಂಭವಿಸಿದೆ. ಸುಮಾರು 4 ಮನೆಗಳಿಗೆ ಬೆಂಕಿ ತಗಲಿ ದೊಡ್ಡ ರೀತಿಯ ಸಮಸ್ಯೆ ಉಂಟಾಗಿದೆ.

 

ವರದಿಗಳ ಪ್ರಕಾರ, ಗೋಣಿ ಚೀಲ ವ್ಯಾಪಾರಿ ಅಬ್ದುಲ್ ಖಾದರ್ ರವರ ಪ್ಲಾಸ್ಟಿಕ್ ಚೀಲಗಳ ದಸ್ತಾನು ಕೊಠಡಿಗೆ ತಗಲಿದ ವಿದ್ಯುತ್ ಶಾರ್ಟ್ ಸರ್ಕ್ಯುಟ್ ನಿಂದ ಈ ಬೆಂಕಿ ಅವಘಡ ಸಂಭವಿಸಿದ್ದು, ಆಮೇಲೆ ಉಳಿದ ಹತ್ತಿರದ ಮನೆಗಳಿಗೆ ಹರಿಡದೆ ಎಂದು ತಿಳಿದುಬಂದಿದೆ.

 

ಅಕ್ಕಪಕ್ಕದ 4 ಮನೆಗಳಿಗೆ ಬೆಂಕಿಯ ಕೆನ್ನಾಲಗೆ ಚಾಚಿದ್ದು, ಈ ಘಟನೆಯಿಂದ ಯಾವುದೇ ರೀತಿಯ ಸಾವು ನೋವು ಸಂಭವಿಸಿಲ್ಲ. ಅಗ್ನಿ ಶಾಮಕ ಮತ್ತು ಸ್ಥಳೀಯರ ಪ್ರಯತ್ನದಿಂದ ಬೆಂಕಿಯನ್ನು ಹತೋಟಿಗೆ ತರುವಲ್ಲಿ ಯಶಸ್ವೀಯಾಗಿದ್ದಾರೆ. 

 

ಮನೆಯಲ್ಲಿ ಬೆಂಕಿ ಕಾಣಿಸಿಕೊಂಡ ಕೂಡಲೇ ಅಗ್ನಿಶಾಮಕ ದಳದವರಿಗೆ ಕರೆ ಮಾಡಿ ತಿಳಿಸಲಾಯಿತು. ಬೆಂಕಿಯ ಪ್ರಮಾಣ ಜಾಸ್ತಿ ಇದ್ದುದರಿಂದ ಅಗ್ನಿಶಾಮಕ ದಳದವರು ಬಹಳಷ್ಟು ಪ್ರಯತ್ನಪಟ್ಟು ಉಳಿದ ಮನೆಗಳಿಗೆ ಹರಡಂತೆ ನೋಡಿಕೊಂಡರು ಮತ್ತು ಕೆಲವೇ ಗಂಟೆಗಳಲ್ಲಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. 

 

ಈ ಮದ್ಯೆ ನೀರಿನ ಕೊರತೆ ಎದುರಾದ ಹಿನ್ನಲೆಯಲ್ಲಿ ಕದ್ರಿ ಅಗ್ನಿಶಾಮಕ ಠಾಣೆಯಿಂದ 10 ಸಾವಿರ ಲೀ. ಸಾಮರ್ಥ್ಯದ ನೀರಿನ ಟ್ಯಾಂಕರ್ ಕೂಡ ಆಗಮಿಸಿತ್ತು. ಪಂಪಿನ ಮೂಲಕ ಸ್ಥಳೀಯರ ಸಹಕಾರದೊಂದಿಗೆ ನೀರು ತುಂಬಿಸಲಾಯಿತು. ಜಾಗದ ಕೊರತೆಯಿಂದ ವಾಹನಗಳಿಗೆ ತೆರೆಯಲು ತೊಂದರೆಗಳು ಉಂಟಾಗಿದೆ ಎಂದು ಅಗ್ನಿಶಾಮಕ ದಳದವರು ತಿಳಿಸಿದ್ದರು.

 

ಮದ್ಯ ರಾತ್ರಿ 1.00 ಕ್ಕೆ  ಕ್ಷೇತ್ರದ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ದೌಡಾಯಿಸಿ, ಅಗ್ನಿಶಾಮಕ ದಳದ ಕಾರ್ಯಾಚರಣೆಯನ್ನು ವೀಕ್ಷಿಸಿದರು. ಅವರು ಮನೆಮಂದಿಗೆ ಸಾಂತ್ವನ ಹೇಳುವುದರ ಮೂಲಕ, ನಷ್ಟದ ಅಂದಾಜುಗಳನ್ನು ಪರಿಶೀಲನೆ ಮಾಡಲು ಅಧಿಕಾರಿಗಳಿಗೆ ಶಿಫಾರಿಸು ಮಾಡಿದರು. ಶಾಸಕರ ಜೊತೆ ಕಂದಾಯ ನಿರೀಕ್ಷಿಕ ವಿಜಯ ಆರ್ ಸಹಿತ ಅಧಿಕಾರಿಗಳು ಪಾಲ್ಗೊಂಡಿದ್ದರು. 

 

ದಾಸ್ತಾನು ಕೊಠಡಿ ಹಾಗೂ ಮನೆಗಳು ಸೇರಿ 20 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದ್ದು ಗ್ರಾಮಾಂತರ ಪೊಲೀಸರು, ಅಧಿಕಾರಗಳು ಹಾಗೂ ಸ್ಥಳೀಯ ಮುಖಾಂಡರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆಗೆ ಸಹಕರಿಸಿದರು.