ಬಂಟ್ವಾಳ : ಕಳೆದ ಕೆಲ ದಿನಗಳ ಹಿಂದೆ ಬಿ.ಸಿ ರೋಡಿನಲ್ಲಿ ನಡೆದ ಭೀಕರ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಯುವ ವಕೀಲ ಇಹ ಲೋಕ ತ್ಯಜಿಸಿದ್ದಾರೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನ್ಯಾಯವಾದಿ ಪ್ರಥಮ್ ಬಂಗೇರ (ವ. 27) ಚಿಕಿತ್ಸೆ ಫಲಕಾರಿಯಾಗದೆ ತನ್ನ ಕೊನೆಯುಸಿರೆಳೆದಿದ್ದಾನೆ.
ದುಃಖದಲ್ಲೂ ತ್ಯಾಗ : ಅಂಗಾಂಗ ದಾನ
ಮಾನವೀಯತೆಗೆ ಅಪರೂಪದ ಉದಾಹರಣೆಯಾಗಿ ಅವರ ಪೋಷಕರು ಶೋಕವನ್ನು ಮಹಾನ್ ತ್ಯಾಗಕ್ಕೆ ಪರಿವರ್ತಿಸಿ, ಮೃತರ ಅಂಗಾಂಗಳನ್ನು ದಾನ ಮಾಡುವ ಮೂಲಕ ಅನೇಕ ಜನರಿಗೆ ಹೊಸ ಜೀವನ ಕೊಟ್ಟಿದ್ದಾರೆ. ಮೃತರ ಪೋಷಕರು 2 ಕಣ್ಣು, ಕಿಡ್ನಿ, ಲಿವರ್ ಮತ್ತು ಕರುಳಿನ ಭಾಗವನ್ನು ದಾನವಾಗಿ ನೀಡಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸಮಾಜಕ್ಕೆ ಸಂದ ಸಂದೇಶ:
ಪ್ರಥಮ್ ಬಂಗೇರ ಅವರ ಪೋಷಕರ ಈ ತ್ಯಾಗ, ಅಂಗಾಂಗ ದಾನದ ಮಹತ್ವವನ್ನು ಸಮಾಜಕ್ಕೆ ಒತ್ತಿಹೇಳುತ್ತದೆ. ತಮ್ಮ ನೋವನ್ನು ಹಂಚಿಕೊಳ್ಳದೆ, ಮತ್ತೊಬ್ಬರ ಬದುಕಿಗೆ ಬೆಳಕಾಗುವ ನಿರ್ಧಾರ ಅವರು ಕೈಗೊಂಡರು. ಅಪಘಾತದಲ್ಲಿ ಪ್ರಾಣ ಕಳೆದುಕೊಂಡರೂ, ಅವರ ದಾನದಿಂದ ಹಲವರು ಬದುಕುಳಿಯುವ ಅವಕಾಶ ಪಡೆದಿದ್ದಾರೆ.
ಪ್ರಥಮ್ ಬಂಗೇರ ವಿವೇಕಾನಂದ ಕಾನೂನು ಕಾಲೇಜು ಪುತ್ತೂರಿನಲ್ಲಿ ತನ್ನ ಕಾನೂನು ವಿದ್ಯಾಭ್ಯಾಸ ಪಡೆದಿದ್ದರು.