ಉಡುಪಿ, ಮಲ್ಪೆ : ನಿನ್ನೆ ಉಡುಪಿಯ ಮಲ್ಪೆಯಲ್ಲಿ ಒಬ್ಬ ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿ ಹೊಡೆದಿರುವ ಘಟನೆ ನಡೆದಿದೆ. ಹಿಂದೆಲ್ಲ ಬಿಹಾರ ಅಥವಾ ಕರ್ನಾಟಕದ ಕೆಲ ಭಾಗಗಳಲ್ಲಿ ಈ ರೀತಿಯ ಘಟನೆಯ ಸುದ್ದಿಗಳನ್ನು ಆಗ್ಗಾಗೆ ಕೇಳುತ್ತಿದ್ದೆವು. ಆದರೆ ಬುದ್ದಿವಂತರ ಕರಾವಳಿಯಲ್ಲಿ ಈ ರೀತಿಯ ಘಟನೆ ನಡೆದಿರುವುದು ಆಶ್ಚರ್ಯಕರವಾಗಿದೆ.
ಮಲ್ಪೆಯ ಪೊಲೀಸ್ ಆಫೀಸರ್ ಮಾತನಾಡಿ, ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ ಹೊಡೆದಿರುವ ಘಟನೆಯ ವಿಡಿಯೋ ವೈರಲ್ ಆಗಿರುವುದನ್ನು ಗಮನಿಸಿ ತನಿಖೆ ಮುಂದುವರಿಸಿ ಬಂಧಿತರನ್ನು ಅರೆಸ್ಟ್ ಮಾಡಲಾಗಿದೆ ಎಂದು ತಿಳಿಸಿದರು.
ಮರಕ್ಕೆ ಕಟ್ಟಿ ಥಳಿತ
ವಿಜಯನಗರ ಜಿಲ್ಲೆಯಿಂದ ಬಂದ ಮಹಿಳೆ, ಮೀನು ಕದ್ದಿದಾರೆ ಎಂಬ ಆರೋಪದ ಮೇರೆಗೆ ಸ್ಥಳೀಯರಾಗಿರುವ ಲಕ್ಷ್ಮೀಬಾಯಿ ಹೊಡೆದಿದ್ದಾರೆ. ಮಹಿಳೆ ಮೀನುಕದ್ದಿದಾರೆ ಎಂದು ಹೇಳಿ ಸ್ಥಳೀಯರನ್ನು ಸೇರಿಸಿ ಕದ್ದ ಮಹಿಳೆಯನ್ನು ಮರಕ್ಕೆ ಕಟ್ಟಿ ಥಳಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿರುವ ಕಾರಣ ಪೊಲೀಸರಿಗೆ ಆರೋಪಿಗಳನ್ನು ಪತ್ತೆ ಹಚ್ಚಲು ಸಹಕಾರಿಯಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಆರೋಪಿಗಳ ಮೇಲೆ ಕೇಸು ದಾಖಲು
ಈ ಪ್ರಕರಣದ ಸಲುವಾಗಿ ವಿಜಯನಗರದಿಂದ ಬಂದಿರುವ ಮಹಿಳೆಯ ಮುಖಾಂತರ ಮಲ್ಪೆ ಪೊಲೀಸ್ ಸ್ಟೇಷನ್ ನಲ್ಲಿ ದೂರನ್ನು ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 32/25ರ ಅಡಿಯಲ್ಲಿ ಸೆಕ್ಷನ್ 74, 115, 351, 352 ಮತ್ತು ದೌರ್ಜನ್ಯ ಕಾಯಿದೆಯಡಿ ಪ್ರಕರಣ ದಾಖಲಿಸಿದ್ದಾರೆ. ವಿಡಿಯೋ ನಲ್ಲಿ ಲಕ್ಷ್ಮೀ ಬಾಯಿ, ಸುಂದರ್ ಮತ್ತು ಇನ್ನೊಬ್ಬ ಆರೋಪಿ ಮೇಲೆ ಪ್ರಕರಣ ದಾಖಲಾಗಿ ಪೊಲೀಸರು ಬಂಧಿಸಿದ್ದಾರೆ. ಉಳಿದ ಯಾರೆಲ್ಲ ಪಾತ್ರವಿದೆ ಎಂದು ವಿಡಿಯೋ ಪರೀಕ್ಷಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಉಡುಪಿ ಡಿಸಿ ಪ್ರತಿಕ್ರಿಯೆ
ಉಡುಪಿ ಡಿಸಿ ಡಾ. ವಿದ್ಯಾಕುಮಾರಿ ಮಾಧ್ಯಮದವರ ಜೊತೆ ಮಾತನಾಡಿ, ಸಣ್ಣ ಪುಟ್ಟ ತಪ್ಪುಗಳು ಮಾಡಿರಬಹುದು ಆದರೆ ಆ ರೀತಿ ಹೊಡೆಯುವುದು ದೊಡ್ಡ ತಪ್ಪು ಎಂದಿದ್ದಾರೆ. ಮುಂದಕ್ಕೆ ಮಾತನಾಡಿ, ಇಲ್ಲಿ ದೊಡ್ಡ ಸಮಸ್ಯೆ ಏನೆಂದರೆ ಹೊಡೆಯುವ ಸಂದರ್ಭದಲ್ಲಿ ಅಕ್ಕ ಪಕ್ಕದಲ್ಲಿ ಜನ ನಿಂತು ನಗ್ತಾ ನಿಂತಿದ್ದಾರೆ, ಯಾರಾದರೂ ಒಬ್ಬರು ಸಹ ತಡೆಯುವುದಾಗಲಿ ಮಾಡಲಿಲ್ಲ. ಇದರಿಂದ ನಮ್ಮ ಮನೋಸ್ಥಿತಿ ತಿಳಿಸುತ್ತದೆ ಎಂದರು. ಕಾನೂನುಬದ್ದವಾಗಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.