20 June 2025 | Join group

ವಿದ್ಯುತ್ ಶಾಕ್ ! ರಾಜ್ಯದ ಜನತೆಗೆ ವಿದ್ಯುತ್ ದರ ಏರಿಕೆಯ ಶಾಕ್.. ಏಪ್ರಿಲ್ ಒಂದರಿಂದ ಹೆಚ್ಚಳ.

  • 20 Mar 2025 05:54:48 PM

ರಾಜ್ಯದಲ್ಲಿ ವಿದ್ಯುತ್ ಬೆಲೆ ಹೆಚ್ಚಳವಾಗಿದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ವಿದ್ಯುತ್ ದರದ ಹೆಚ್ಚಳದ ಬಗ್ಗೆ ಆದೇಶ ಹೊರಡಿಸಿದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ) ಯೂನಿಟಿಗೆ 36 ಪೈಸೆ ಹೆಚ್ಚಳ ಮಾಡಿ ರಾಜ್ಯದ ಜನರಿಗೆ ಶಾಕ್ ನೀಡಿದೆ. ಏಪ್ರಿಲ್ 1 ರಿಂದ ಈ ಹೊಸ ಆದೇಶ ಜಾರಿಯಾಗಲಿದೆ.

 

ಕೆಲ ತಿಂಗಳ ಹಿಂದೆ ಹಾಲಿನ ದರ ಹೆಚ್ಚಳ, ಆಮೇಲೆ ಸಾರಿಗೆ ನಿಗಮದಿಂದ ಬಸ್ ಏರಿಕೆ, ಮತ್ತೆ ಬೆಂಗಳೂರು ನಗರದ ನಮ್ಮ ಮೆಟ್ರೋ ಬೆಲೆ ಏರಿಕೆ, ಆಟೋ ದರ ಏರಿಕೆ ಈಗ ವಿದ್ಯುತ್ ಬೆಲೆ ಏರಿಕೆ. ಜನ ಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟುತ್ತಲೇ ಇದೆ. ಚುನಾವಣೆ ಸಂದರ್ಭದಲ್ಲಿ ಜಾರಿಗೆ ತಂದ ಗೃಹಜ್ಯೋತಿ ಯೋಜನೆಯ ಹೊರೆ ಭರಿಸಲು ಈ ರೀತಿಯಾದ ದರ ಹೆಚ್ಚಳ ಕಾಂಗ್ರೆಸ್ ಸರಕಾರ ಮಾಡುತ್ತಿದೆ ಎಂದು ಜನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 

ರಾಜ್ಯ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ, "ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ, ಅವರು ನೀಡಿರುವುದು ಬೆಲೆ ಏರಿಕೆ ಮಾತ್ರ. ಅವರು ನಿಜವಾಗಿಯೂ ಜಾರಿಗೆ ತಂದಿರುವ ಏಕೈಕ ಭರವಸೆ ಇದು" ಎಂದು ಹೇಳಿದರು. ಸರ್ಕಾರವು ರೈತರಿಗೆ ಸಾಕಷ್ಟು ವಿದ್ಯುತ್ ಪೂರೈಕೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ವಿಫಲವಾಗಿದೆ ಮತ್ತು ಸರ್ಕಾರಿ ಇಲಾಖೆಗಳ ಬಾಕಿ ವಿದ್ಯುತ್ ಬಾಕಿಯನ್ನು ನಿರ್ಲಕ್ಷಿಸಿದೆ ಎಂದು ಅವರು ಆರೋಪಿಸಿದರು, ಇದು 6,500 ಕೋಟಿ ರೂ.ಗಳಷ್ಟಿದೆ ಎಂದು ವರದಿಯಾಗಿದೆ.

 

ಒಂದೆಡೆ, ಅವರು ಉಚಿತ ವಿದ್ಯುತ್ ನೀಡುವುದಾಗಿ ಹೇಳಿಕೊಳ್ಳುತ್ತಾರೆ, ಆದರೆ ಮತ್ತೊಂದೆಡೆ, ಅವರು ಸುಂಕವನ್ನು ಹೆಚ್ಚಿಸುತ್ತಾರೆ. ಸರ್ಕಾರವು ಸಾಮಾನ್ಯ ನಾಗರಿಕರ ಹೋರಾಟಗಳನ್ನು ಪರಿಹರಿಸುವುದಕ್ಕಿಂತ ಸಮಾಧಾನಪಡಿಸುವ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತದೆ" ಎಂದು ಅವರು ಆರೋಪಿಸಿದರು, ಬಿಜೆಪಿ ವಿಧಾನಸಭೆ ಅಧಿವೇಶನದಲ್ಲಿ ಈ ವಿಷಯವನ್ನು ಎತ್ತುತ್ತದೆ ಎಂದು ಹೇಳಿದರು.

 

ಉಚಿತ ಉಚಿತ ಎನ್ನುತ್ತಲೇ ಈ ರೀತಿಯ ಶಾಕ್ ಕೊಟ್ಟರೆ ಹೇಗೆ, ದಿನದಿಂದ ದಿನಕ್ಕೆ ಬೆಲೆಯೇರಿಕೆ ಆದರೆ ಜನ ಜೀವನ ನಡೆಸುವುದಾದರೂ ಹೇಗೆ, ಚುನಾವಣಾ ಸಂಧರ್ಭದಲ್ಲಿ ಎಲ್ಲವನ್ನೂ ಫ್ರೀ ಎನ್ನುತ್ತಿದ್ದ ಸರಕಾರ, ಈಗ ಪ್ರತಿಯೊಂದು ಹಂತದಲ್ಲೂ ದರ ಹೆಚ್ಚಳ ಮಾಡುವುದು ಯಾವ ನ್ಯಾಯ ಎಂದು ಜನ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಕಾಂಗ್ರೆಸ್ ಮಾತ್ರ ಈ ದರ ಹೆಚ್ಚಳವನ್ನು ಸಮರ್ಥಿಸಿಕೊಂಡಿದೆ.