ಬಂಟ್ವಾಳ: ಬಂಟ್ವಾಳ ತಾಲೂಕಿನ ಕಾರಿಂಜೇಶ್ವರದ ಕೊಡ್ಯಮಲೆ ಬೆಟ್ಟ ಸಮುದ್ರ ಮಟ್ಟದಿಂದ 1000 ಅಡಿ ಎತ್ತದರಲ್ಲಿದೆ.
ಮಾರ್ಚ್ 23ರ ರವಿವಾರದಂದು, ಬರಿಗೈಯಲ್ಲಿ ಬೆಟ್ಟಗಳನ್ನು ಹತ್ತುವ ಸಾಹಸಿ ಕೋತಿರಾಜ್, ಕಾರಿಂಜೇಶ್ವರ ಬೆಟ್ಟವನ್ನು ಏರುವ ಮೂಲಕ ಸಾಹಸ ಮಾಡಿದ್ದಾರೆ. ಕರ್ನಾಟಕದ ಸ್ಪೈಡರ್ ಮ್ಯಾನ್ ಎಂದೇ ಹೆಸರುವಾಸಿಯಾಗಿರುವ ಜೋತಿರಾಜ್ ಅಲಿಯಾಸ್ ಕೋತಿರಾಜ್ ಊರವರ ಸಹಕಾರದಿಂದ ಕಾರಿಂಜ ಬೆಟ್ಟವನ್ನು ಏರಿ ಜನರಿಂದ ಮೆಚ್ಚುಗೆ ಗಳಿಸಿದರು.
ಬಡವರ ಕಲ್ಯಾಣಕ್ಕಾಗಿ ಟ್ರಸ್ಟ್ ನಡೆಸುತ್ತಿರುವ ಇವರು, ಈ ಸಾಹಸದಿಂದ ಬರುವ ಹಣವನ್ನು ಅನಾಥ ಮಕ್ಕಳ ಶಿಕ್ಷಣಕ್ಕೆ ವಿನಿಯೋಗಿಸಲಾಗುವುದು ಎಂದರು.
350ft. ಎತ್ತರದ ಬಂಡೆಗಳನ್ನು ಏರುವ ಮೊದಲು " ಬಂಡೆ ತುಂಬಾ ದೊಡ್ಡದಿದೆ, ಹಿಡಿತ ಕಡಿಮೆ ಇರುವುದರಿಂದ ಹತ್ತಲು ತುಂಬಾ ಕಷ್ಟ, ಆದರೆ ದೇವರ ಅನುಗ್ರಹದಿಂದ ಮೇಲೆ ಹತ್ತುವೆ" ಎಂದರು.
ಕಾರಿಂಜೇಶ್ವರ ಬೆಟ್ಟವನ್ನು ಹತ್ತಿದ ನಂತರ, ಜ್ಯೋತಿರಾಜ್ ತುತ್ತತುದಿಯಲ್ಲಿ ದೇವರ ಕೇಸರಿ ಬಾವುಟ ಮತ್ತು ಕರ್ನಾಟಕದ ಬಾವುಟ ಹಾರಿಸಿ ಸೇರಿದ ಊರಿನವರ ಜೊತೆ ಸಂಭ್ರಮಿಸಿದರು. ಅರ್ಚಕರು ವಿಶೇಷ ಪೂಜಾ ಸೇವೆ ಮಾಡುವ ಮೂಲಕ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿ, ಅರ್ಚಕವೃಂದ, ಊರಿನ ಗಣ್ಯರು ಉಪಸ್ಥಿತರಿದ್ದರು.