16 December 2025 | Join group

ಬಂಟ್ವಾಳ: ಅಶ್ರಫ್ ಕೊಲೆ ಪ್ರಕರಣ; ಭರತ್ ಕುಮ್ಡೇಲು ಗೆ ನ್ಯಾಯಾಂಗ ಬಂಧನ..!

  • 10 Oct 2025 05:03:38 PM

ಬಂಟ್ವಾಳ: 2017ನೇ ವರ್ಷದಲ್ಲಿ ಕಲಾಯಿ ಅಶ್ರಫ್ ಕೊಲೆ ಪ್ರಕರಣಕ್ಕೆ ಸಂಬಂದಿಸಿದಂತೆ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಭರತ್ ಕುಮ್ಡೇಲ್‌‌ಗೆ ನ್ಯಾಯಾಂಗ ಬಂಧನ ವಿಧಿಸಿದೆ.

 

ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2017ನೇ ವರ್ಷದಲ್ಲಿ ಕಲಾಯಿ ಅಶ್ರಫ್ ಕೊಲೆ ಪ್ರಕರಣಕ್ಕೆ ಸಂಬಂದಿಸಿದಂತೆ ಅ.ಕ್ರ: 169/2017 500: 143, 147, 148, 447, 448, 302. 120(ಬಿ), 201 ಜೊತೆಗೆ 149 ಐಪಿಸಿ ಪ್ರಕರಣದಲ್ಲಿ ಮಾನ್ಯ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಬಂಟ್ವಾಳ ತಾಲೂಕು ನಿವಾಸಿ ಭರತ್ ಕುಮ್ಡೇಲ್‌ ದಿನಾಂಕ: 10.10,2025 ರಂದು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಗಳೂರು ಇಲ್ಲಿಗೆ ಹಾಜರಾಗಿದ್ದು ನ್ಯಾಯಾಲಯವು ಆರೋಪಿಗೆ ದಿನಾಂಕ: 25.10.2025 ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 54/2025 ಕಲಂ 103 109 118(1) 190 191(1) 118(2) 191(2) 191(3) ಬಿಎನ್‌ಎಸ್ ರಂತೆ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದ ಎ 1 ಆರೋಪಿ ಭರತ್ ಕುಮ್ಡೆಲ್ ಪ್ರಕರಣ ದಾಖಲಾದ ದಿನದಿಂದಲೇ ತಲೆಮೆರೆಸಿಕೊಂಡಿರುವುದಾಗಿದೆ.