ಮಂಗಳೂರು : -ಮುಂಬೈ -ಮಂಗಳೂರು ನಡುವೆ ಪ್ರಯಾಣಿಸುವವರ ಸಂಖ್ಯೆ ಮೊದಲಿನಂತೆಯೇ ಈಗಲೂ ಇದೆ. ಸ್ವಲ್ಪ ಪ್ರಯಾಣಿಕರು ವಿಮಾನದ ಸೇವೆ ಬಳಸಿದರೆ, ಹೆಚ್ಚಿನ ಪ್ರಯಾಣಿಕರು ರೈಲ್ವೆಯನ್ನೇ ಅವಲಂಬಿಸಿದ್ದಾರೆ.
ಬಹುಕಾಲದ ಬೇಡಿಕೆಯಾದ ಮಂಗಳೂರು - ಮುಂಬೈ ವಂದೇ ಭಾರತ್ ಎಕ್ಸ್ ಪ್ರೆಸ್ ಆರಂಭವಾಗುವ ಸಮಯ ಕೂಡಿಬರಲಿದೆ. ಈಗಿರುವ ಮಂಗಳೂರು - ಗೋವಾ ಮತ್ತು ಮುಂಬೈ - ಗೋವಾ ಮಾರ್ಗದ ವಂದೇ ಭಾರತ್ ರೈಲುಗಳೆರಡನ್ನೂ ಸೇರಿಸಿ ಒಂದೇ ರೈಲಾಗಿ ಪರಿವರ್ತಿಸುವ ಯೋಜನೆ ಬಗ್ಗೆ ಚರ್ಚೆ ನಡೆಯುತ್ತಿದೆ.
ಒಂದು ವೇಳೆ ಈ ಯೋಜನೆ ಜಾರಿಗೆ ಬಂದರೆ ಮುಂಬೈ ಮತ್ತು ಮಂಗಳೂರಿನ ರೈಲು ಪ್ರಯಾಣ ಕೇವಲ 12 ಗಂಟೆಯಲ್ಲಿ ಮುಗಿಯಲಿದೆ. ಈಗ ಇರುವ ಪ್ರಯಾಣ ಸಮಯಕ್ಕಿಂತ ಸುಮಾರು 8 ರಿಂದ 10 ಗಂಟೆ ಕಡಿಮೆಯಾಗಲಿದೆ.
ಸದ್ಯಕ್ಕೆ ಮಂಗಳೂರು-ಗೋವಾ ನಡುವಿನ ವಂದೇ ಭಾರತ್ ಗೆ ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವುದರಿಂದ, ಈ ಯೋಜನೆಯನ್ನು ಕೈ ಬಿಟ್ಟು ಅದನ್ನು ಮಂಗಳೂರು - ಮುಂಬೈಗೆ ವಂದೇ ಭಾರತ್ ನೇರ ಸಂಪರ್ಕ ಕಲ್ಪಿಸಲಾಗುವುದು.
ವಂದೇ ಭಾರತ್ ಎಕ್ಸ್ ಪ್ರೆಸ್ ಗೆ ಭಾರತದಾದ್ಯಂತ ಹೆಚ್ಚಿನ ಮೆಚ್ಚುಗೆ ಇರುವುದರಿಂದ, ಮಂಗಳೂರಿನ ಪ್ರಯಾಣಿಕರಿಗೆ ಈ ಯೋಜನೆ ಜಾರಿಗೆ ಬಂದರೆ ತುಂಬಾ ಸಂತಸ ತರುವ ವಿಷಯವಾಗಿದೆ.