'ಅಬ್ಬಿ ಜಲಪಾತ' ಎಂದೂ ಕರೆಯಲ್ಪಡುವ ಮಂಜೇಹಳ್ಳಿ ಜಲಪಾತಗಳು ಸಕಲೇಶಪುರದ ಅತ್ಯಂತ ಸುಂದರವಾದ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ. ಮಳೆಗಾಲದ ತಿಂಗಳುಗಳಲ್ಲಿ ಮಂಜೆಹಳ್ಳಿ ಜಲಪಾತವನ್ನು ತಲುಪಲು ಪರಿಪೂರ್ಣ ಮತ್ತು ಸೂಕ್ತ ಸಮಯ. ಮಂಜೇಹಳ್ಳಿ ಜಲಪಾತವು ಪ್ರಕೃತಿಯ ಪ್ರಶಾಂತತೆಯಿಂದ ಕಂಗೊಳಿಸುತ್ತಿದೆ.
ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಮಂಜೇಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಈ ಜಲಪಾತ ಪ್ರಕೃತಿ ಪ್ರೇಮಿಗಳ ಹೃದಯವನ್ನು ಗೆದ್ದಿದೆ. ಪಶ್ಚಿಮ ಘಟ್ಟಗಳಿಂದ ಸುತ್ತುವರೆದಿರುವ ಕರ್ನಾಟಕದ ಜನಪ್ರಿಯವಾದ ಗಿರಿಧಾಮವಾಗಿವೇ ಸಕಲೇಶಪುರ. ಇದು ತನ್ನದೇ ಆದ ಪ್ರಾಕೃತಿಕ ಶ್ರೀಮಂತಿಕೆಯನ್ನು ತನ್ನಲ್ಲಿ ಭದ್ರವಾಗಿ ಹಿಡಿದಿಟ್ಟುಕೊಂರೋದು ಅದರ ವಿಶೇಷತೆ.
ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಮರೆಯಲಾಗದ ವಿಶ್ರಾಂತಿಗಾಗಿ ಮಂಜೇಹಳ್ಳಿ ಜಲಪಾತಕ್ಕೆ ಒಮ್ಮೆಯಾದರೂ ಭೇಟಿ ಕೊಡಲೇಬೇಕು. ಸಕಲೇಶಪುರದಲ್ಲಿ ಒಟ್ಟು 3 ಜಲಪಾತವಿದೆ. ಒಂದನೆಯದು ಮಂಜೇನಹಳ್ಳಿ ಜಲಪಾತ, ಹಡ್ಲು ಜಲಪಾತ ಮತ್ತು ಮೂಕನಮನೆ ಜಲಪಾತ.
ಸಕಲೇಶಪುರ ಒಟ್ಟಾರೆಯಾಗಿ ದಟ್ಟವಾದ ಕಾಡುಗಳು, ಐತಿಹಾಸಿಕ ದೇವಾಲಯಗಳು, ಭವ್ಯವಾದ ಹಳೆಯ ಕೋಟೆಗಳು, ಎತ್ತರದ ಪರ್ವತ ಶಿಖರಗಳು ಮತ್ತು ಆಕರ್ಷಕ ಜಲಪಾತಗಳನ್ನು ಹೊಂದಿದೆ. ಕರ್ನಾಟಕದ ಸಕಲೇಶಪುರದ ಪ್ರವಾಸವನ್ನು ಕೇವಲ ಕರ್ನಾಟಕದ ಪ್ರವಾಸಿಗರು ಮಾತ್ರವಲ್ಲ, ಅನೇಕ ರಾಜ್ಯಗಳಿಂದ ಭೇಟಿ ನೀಡುತ್ತಾರೆ.
ಮಂಜೇಹಳ್ಳಿ ಜಲಪಾತ ಮಳೆಗಾಲದ ಸಂದರ್ಭದಲ್ಲಿ ಅದು ಝೇಂಕರಿಸುವ ಸೌಂದರ್ಯವನ್ನು ನೋಡುವುದು ತುಂಬಾ ರಸಮಯ. ಈ ಆಕರ್ಷಕವಾದ ಜಲಪಾತವು ಸುಮಾರು 20 ಅಡಿ ಉದ್ದದ ಜಲಪಾತವಾಗಿದ್ದು, ಹಚ್ಚ ಹಸಿರಿನ ಬೆಟ್ಟಗಳ ನಡುವೆ ನೆಲೆಗೊಂಡಿದೆ.
ಭೇಟಿ ನೀಡಲು ಉತ್ತಮ ಸಮಯ:
ಬೇಸಿಗೆ ಮತ್ತು ಚಳಿಗಾಲದಲ್ಲಿ ನೀರು ಒಣಗುವುದರಿಂದ ಈ ಜಲಪಾತಕ್ಕೆ ಭೇಟಿ ನೀಡಲು ಮಳೆಗಾಲದ ತಿಂಗಳುಗಳು ಅತ್ಯುತ್ತಮ ಋತು.
ಸಮಯ: ಜಲಪಾತವನ್ನು ಬೆಳಗ್ಗೆ 6 ರಿಂದ ಸಂಜೆ 5 ಗಂಟೆಯವೆರೆಗೆ ಭೇಟಿ ನೀಡಬಹುದು.
ಮಂಜೇಹಳ್ಳಿ ಜಲಪಾತಕ್ಕೆ ಭೇಟಿ ಕೊಡುವ ಪ್ರವಾಸಿಗರು ತೆಗೆದುಕೊಳ್ಳಬೇಕಾದ ಮುಂಜಾಗೂರತೆ ಕ್ರಮಗಳು
- ಮಳೆಗಾಲದಲ್ಲಿ ಕಲ್ಲುಗಳು ಹೆಚ್ಚು ಜಾರುವುದರಿಂದ, ಜಾಗರೂಕತೆಯಿಂದ ನಡೆದುಕೊಳ್ಳಬೇಕು.
- ಬೇಟಿ ಮುಗಿಸಿದ ಬಳಿಕ ಪ್ಲಾಸ್ಟಿಕ್ ಅಥವಾ ಮಲಿನತೆ ಬಿಸಾಡಬಾರದು.
- ಚಿಕ್ಕ ಮಕ್ಕಳನ್ನು ನೇರವಾಗಿ ಜಲಪಾತದ ಬಳಿ ಒಯ್ಯಬಾರದು.
- ಜಲಪಾತದ ಮಧ್ಯಭಾಗದಲ್ಲಿ ನಿಲ್ಲಬಾರದು – ನೀರಿನ ಹರಿವು ಏಕಾಏಕಿ ಹೆಚ್ಚಾಗಬಹುದು.
ಮಂಜೇಹಳ್ಳಿ ಜಲಪಾತಕ್ಕೆ ತಲುಪುವ ವಿಧಾನ:
ಸಕಲೇಶಪುರದಿಂದ ಕೇವಲ 6 ಕಿ.ಮೀ. ದೂರದಲ್ಲಿದೆ ಈ ಜಲಪಾತ. ಬೆಂಗಳೂರಿನಿಂದ 225 ಕಿ.ಮೀ. ಮತ್ತು ಮಂಗಳೂರಿನಿಂದ 130 ಕಿ.ಮೀ. ದೂರದಲ್ಲಿದೆ ಈ ಜಲಪಾತ. ರೈಲು ನಿಲ್ದಾಣದಿಂದ ಟ್ಯಾಕ್ಸಿ ಅಥವಾ ಆಟೋ ಮೂಲಕ ಸ್ಥಳ ತಲುಪಬಹುದು. ಸಕಲೇಶಪುರದಲ್ಲಿ ಹೋಂ ಸ್ಟೇಗಳು, ಬಜೆಟ್ ಲಾಜ್ಗಳು ಹಾಗೂ ಕೆಲವು ರೆಸ್ಟೋರೆಂಟ್ಗಳಿವೆ.