21 June 2025 | Join group

ಪಂಜಾಬ್‌ನಲ್ಲಿ ಧರ್ಮಸ್ಥಳದ ಆಕಾಂಕ್ಷ ಅನುಮಾನಾಸ್ಪದ ಸಾವು: ಪ್ರಕರಣಕ್ಕೆ ಹೊಸ ಟ್ವಿಸ್ಟ್

  • 19 May 2025 07:15:47 PM

ಧರ್ಮಸ್ಥಳ : ಮೇ 17 ರಂದು ಪಂಜಾಬಿನಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಸಮೀಪದ ಬೊಳಿಯೂರು ನಿವಾಸಿ 22 ವರ್ಷದ ಆಕಾಂಕ್ಷ ಎಸ್ ನಾಯರ್ ಸಾವಿಗೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ.

 

ಈಕೆ ಪಂಜಾಬ್‌ನ ಎಲ್‌ಸಿಯ ಪಾಗ್ವಾಡ ಕಾಲೇಜಿನಲ್ಲಿ ಏರೋನಾಟಿಕ್ಸ್ ಎಂಜಿನಿಯರಿಂಗ್ ಪದವಿ ಮುಗಿಸಿದ್ದಳು. ಕಳೆದ ಆರು ತಿಂಗಳಿನಿಂದ ದೆಹಲಿಯಲ್ಲಿ ಸ್ಪೈಸ್ ಜೆಟ್ ಏರೋಸ್ಪೇಸ್‌ನಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಆಕಾಂಕ್ಷ, ತಾನು ಕಲಿತ ಸರ್ಟಿಫಿಕೇಟ್ ಪಡೆಯಲು ಪಂಜಾಬ್‌ನ ಎಲ್‌ಸಿಯು ಪಾಗ್ವಾಡ ಕಾಲೇಜಿಗೆ ಹೋಗಿ ಅಲ್ಲಿ ಕಟ್ಟಡದ ಮೇಲಿಂದ ಬಿದ್ದು ಸಾವನಪ್ಪಿದ್ದಾಳೆ ಎಂದು ವರದಿಯಾಗಿತ್ತು.

 

ಆದರೆ ಇದೀಗ ಈ ಪ್ರಕರಣ ಈಗ ಹೊಸ ತಿರುವೊಂದನ್ನು ಪಡೆದುಕೊಂಡಿದೆ. ಆಕಾಂಕ್ಷ ಕಲಿಯುತ್ತಿದ್ದ ಪ್ರಾಧ್ಯಾಪಕರೊಬ್ಬರ ಮೇಲೆ ಪ್ರಕರಣ ದಾಖಲಾಗಿದೆ. ಕೇರಳ ಮೂಲದ ಪ್ರಾಧ್ಯಾಪಕರೊಬ್ಬರ ಜೊತೆ ಆಕಾಂಕ್ಷ ಜಗಳ ಮಾಡಿದ ನಂತರ ಈ ರೀತಿಯ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ.

 

ಆಕೆಯ ಸಹೋದರ ಆಕರ್ಷ್ ನಾಯರ್ ನೀಡಿದ ದೂರಿನ ಆಧಾರದ ಮೇಲೆ, ಪ್ರಾಧ್ಯಾಪಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇಂದು ಮರಣೋತ್ತರ ಪರೀಕ್ಷೆ ನಡೆಸಿ, ನಂತರ ಶವವನ್ನು ಅವರ ಹುಟ್ಟೂರಿಗೆ ತರಲಾಗುವುದು.

 

ಆಕಾಂಕ್ಷ ಪೋಷಕರು ಈ ಪ್ರಕರಣವನ್ನು ಕೂಲಂಕುಶವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ಮತ್ತು ಪಂಜಾಬ್ ಸರಕಾರಕ್ಕೆ ಒತ್ತಾಯ ಮಾಡಿದ್ದಾರೆ.

 

ಇದನ್ನೂ ಓದಿ : ಕಾಲೇಜಿನ ಮಹಡಿಯಿಂದ ಬಿದ್ದು ಸಾವನಪ್ಪಿದ ಧರ್ಮಸ್ಥಳದ ಏರೋಸ್ಪೇಸ್‌ನಲ್ಲಿ ಎಂಜಿನಿಯರ್ ನ ಸಾವು ದುರಂತವೇ ಅಥವಾ ಆತ್ಮಹತ್ಯೆಯೇ..?!