COVID-19 : ಸಾಂಕ್ರಾಮಿಕ ರೋಗ ದೇಶದಲ್ಲಿ ಮತ್ತೊಮ್ಮೆ ಸಂಚಲನ ಮೂಡಿಸುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಕೊರೋನಾ ರೋಗದ ಪುನರುತ್ಥಾನದ ಬಗ್ಗೆ ಕಳವಳಗಳು ಹೆಚ್ಚುತ್ತಿರುವಂತೆಯೇ, ಬೆಂಗಳೂರಿನಲ್ಲಿ ಒಂದು ಆಘಾತಕಾರಿ ಘಟನೆ ನಡೆದಿದೆ. ಬೆಂಗಳೂರಿನಲ್ಲಿ ಮೊದಲ ಕೊರೋನಾ ವೈರಸ್ ಸಂಬಂಧಿತ ಸಾವು ಸಂಭವಿಸಿದೆ ಎಂದು ತಿಳಿದುಬಂದಿದೆ.
ಕರ್ನಾಟಕದಲ್ಲಿ ಒಟ್ಟಾರೆ 38 ಕೊರೋನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು ಅದರಲ್ಲಿ 32 ಪ್ರಕರಣಗಳು ಬೆಂಗಳೂರಿನಿಂದ ವರದಿಯಾಗಿದೆ. ಎಷ್ಟರಲ್ಲೇ ಒಂದು ಸಾವು ಸಂಭವಿಸಿದ್ದು ಜನರಲ್ಲಿ ಬಹಳ ಅಂತಕವನ್ನು ಸೃಷ್ಟಿಮಾಡಿದೆ.
ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ, ಅರೋಗ್ಯ ಸಚಿವ ದಿನೇಶ್ ಗುಂಡುರಾವ್ ನಾಗರಿಕರು ಶಾಂತವಾಗಿರಲು ಮತ್ತು ಭಯಭೀತರಾಗದಂತೆ ಒತ್ತಾಯಿಸಿದರು ಮತ್ತು ರಾಜ್ಯ ಆರೋಗ್ಯ ಇಲಾಖೆ ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಭರವಸೆ ನೀಡಿದರು. "ನಾವು ಮಾರ್ಗಸೂಚಿಗಳನ್ನು ಹೊರಡಿಸಿದ್ದೇವೆ ಮತ್ತು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ."ಆದ್ದರಿಂದ "ಭಯಪಡಲು ಯಾವುದೇ ಕಾರಣವಿಲ್ಲ" ಎಂದು ಅವರು ತಿಳಿಸಿದ್ದಾರೆ.
COVID-19 ಟೆಸ್ಟ್ ಕಡ್ಡಾಯ ಮಾಡಿದ ಸರಕಾರ
ಪ್ರಕರಣಗಳ ಹೆಚ್ಚಳವನ್ನು ಪರಿಗಣಿಸಿ, ಆಯ್ದ ಆಸ್ಪತ್ರೆಗಳಲ್ಲಿ COVID-19 ಪರೀಕ್ಷೆಯನ್ನು ಪುನರಾರಂಭಿಸಲು ಸರ್ಕಾರ ನಿರ್ಧರಿಸಿದೆ. ಈಗ ಜಿಲ್ಲಾ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಪರೀಕ್ಷೆಯನ್ನು ನಡೆಸಲಾಗುವುದು. ಹೆಚ್ಚುವರಿಯಾಗಿ, ಈ ಹಿಂದೆ ನಿಷ್ಕ್ರಿಯವಾಗಿದ್ದ ಎಂಟು RT-PCR ಪ್ರಯೋಗಾಲಯಗಳನ್ನು ಮೇ 25 ರಿಂದ ಮತ್ತೆ ತೆರೆಯಲಾಗುವುದು ಎಂದು ಅರೋಗ್ಯ ಇಲಾಖೆ ತಿಳಿಸಿದೆ.
ಉಸಿರಾಟ ಹಾಗೂ ಹೃದಯಸಂಬಂಧಿ ಕಾಯಿಲೆಯಿಂದ ದಾಖಲಾಗಿರುವ ರೋಗಿಗಳಿಂದ ಆಸ್ಪತ್ರೆ ಸಿಬ್ಬಂದಿ ಸ್ಯಾಂಪಲ್ಸ್ ಕಲೆಕ್ಟ್ ಮಾಡಿ ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಮಾಡಬೇಕು. ಜನಸಂದಣಿಯಲ್ಲಿ ಮಾಸ್ಕ್ ಧರಿಸಿ. ಯಾರೂ ಕೂಡ ಭಯ ಪಡುವ ಅಗತ್ಯವಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಕೊಡಿ ಮಠದ ಶ್ರೀಗಳ ಭವಿಷ್ಯ ನಿಜವಾಗಲಿದೆಯೇ?! ಹಾಗಾದರೆ ಏನೆಲ್ಲಾ ನುಡಿದ್ದಾರೆ ಬನ್ನಿ ನೋಡೋಣ
ಮುಖ್ಯಮಂತ್ರಿ ಮುನ್ನೆಚೆರಿಕೆ ಕ್ರಮವಾಗಿ ಮಾಸ್ಕ್ ಬಳಕೆ
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ತನ್ನ ಮೈಸೂರು ನಿವಾಸದಲ್ಲಿ ಕೋವಿಡ್ ಮಾಸ್ಕ್ ಧರಿಸಿ ಜನರ ಅವಾಹಲುಗಳನ್ನು ಸ್ವೀಕರಿಸುತ್ತಿದ್ದರು. ಈ ಮೂಲಕ ರಾಜ್ಯದ ಜನತೆಗೆ ಎಚ್ಚರಿಕೆಯಿಂದ ಇರಲು ಪರೋಕ್ಷವಾಗಿ ಸೂಚನೆ ನೀಡಿದ್ದಾರೆ. ಸರಕಾರದ ವತಿಯಿಂದ ಭಯಭೀತರಾಗುವ ಅಗ್ಯತ್ಯತೆ ಇಲ್ಲಾ ಎಂದರು ಸಹ ಜನರು ಮುನ್ನಚ್ಚರಿಕೆ ಕ್ರಮ ಪಾಲಿಸುವುದು ಬಹಳ ಉತ್ತಮವಾಗಿದೆ.
ಗರ್ಭಿಣಿಗೆ ಕೊರೋನಾ ಸೋಂಕು, ಸ್ಥಿತಿ ಗಂಭೀರ
ಬೆಳಗಾವಿ ಜಿಲ್ಲೆಯಲ್ಲಿ 25 ವರ್ಷದ ಮಹಿಳೆಯೊಬ್ಬರು ಕೊರೋನಾ ಸೋಂಕು ತಗಲಿದೆ. ಈ ಗರ್ಭಿಣಿ ತಿಂಗಳ ಹಿಂದೆ ಬೇರೆ ರಾಜ್ಯಕ್ಕೆ ಪ್ರಯಾಣಿಸಿದ್ದಾರೆ ಎನ್ನುವ ಮಾಹಿತಿ ಇದೆ ಆದರೆ ಮನೆಯವರು ಇದರ ಬಗ್ಗೆ ಸ್ಪಷ್ಟ ಮಾಹಿತಿ ನೀಡಿಲ್ಲ. ಬೆಳಗಾವಿ ಆಸ್ಪತ್ರೆ ವೈದ್ಯರ ಪ್ರಕಾರ ಅವರಿಗೆ ಬೇರೆ ಕಾಯಿಲೆ ಮತ್ತು ಗರ್ಭಿಣಿ ಆಗಿರುವುದರಿಂದ ಸ್ಥಿತಿ ಸ್ವಲ್ಪ ಮಟ್ಟಿಗೆ ಗಂಭೀರ ಇದೆ ಎಂಬ ಮಾಹಿತಿ ನೀಡಿದ್ದಾರೆ.
ಈ ಎಲ್ಲಾ ಘಟನೆಗಳನ್ನು ಗಮನಿಸಿದಾಗ, ಮತ್ತೊಮ್ಮೆ ಕೊರೋನಾ ಅಲೆ ದೇಶವನ್ನು ಅಲ್ಲೋಲ ಕಲ್ಲೋಲ ಮಾಡಲಿದೆಯೇ ಎಂಬ ಸಂಶಯ ಮೂಡುತ್ತಿದೆ. ರಾಜ್ಯದ ಜನತೆ ಆದಷ್ಟು ಮುನ್ನಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಈ ಮಹಾಮಾರಿ ರೋಗದಿಂದ ದೂರವಿರಲು ಪ್ರಯತ್ನಪಡಬೇಕಾಗಿದೆ.