21 June 2025 | Join group

ಕೊಡಿ ಮಠದ ಶ್ರೀಗಳ ಭವಿಷ್ಯ ನಿಜವಾಗಲಿದೆಯೇ?! ಹಾಗಾದರೆ ಏನೆಲ್ಲಾ ನುಡಿದ್ದಾರೆ ಬನ್ನಿ ನೋಡೋಣ

  • 25 May 2025 01:33:51 AM

ಮತ್ತೆ ಕೊರೋನಾ ಮಹಾಮಾರಿ ಹೆಚ್ಚಾಗಲಿದೆ. ಅಲ್ಲಲ್ಲಿ ಸಾವು ನೋವುಗಳು ಸಂಭವಿಸಲಿದೆ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸ್ಪೋಟಕ ಭವಿಷ್ಯ ನುಡಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಕೋಡಿ ಶ್ರೀಗಳು ವಿಶ್ವದಲ್ಲಿ 5 ವರ್ಷಗಳ ಕಾಲ ಕೋವಿಡ್ ಮಹಾಮಾರಿ ಬೇರೆ ಬೇರೆ ರೂಪದಲ್ಲಿ ಕಾಡಲಿದೆ ಎಂದು ಹೇಳಿದ್ದಾರೆ. ಪತ್ರಕರ್ತರು ಜನ ಏನು ಮಾಡಬೇಕು ಎಂದು ಕೇಳಿದ ಪ್ರಶ್ನೆಗೆ 'ದೇವರ ಪ್ರಾರ್ಥನೆ ಮಾಡಬೇಕು' ಎಂದಿದ್ದಾರೆ.

 

"ಜನರು ಹುಷಾರಿರಬೇಕು. ವಾಯು ರೂಪದಲ್ಲಿ ಬರಲಿದೆ ಈ ರೋಗ. ಕಫ, ಉಸಿರಾಟದ ತೊಂದರೆ ಬಂದು ಸಾವು ಆಗುವ ಸಾಧ್ಯತೆ ಹೆಚ್ಚು. ಜಗತ್ತಿನಲ್ಲಿ ವಾಯು ಮಾಲಿನ್ಯ, ಜಲ ಮಾಲಿನ್ಯ ಮತ್ತು ಭೂ ಮಾಲಿನ್ಯ ಆಗಿದೆ. ಐದು ವರ್ಷಗಳ ಕಾಲ ಗಂಡಾಂತರವಿದೆ, ಹಿಮಾಲಯ ಕರಗಿ ದೆಹಲಿವರೆಗೆ ತಲುಪಲಿದೆ, ಮೇಘ ಸ್ಪೋಟವಾಗುವ ಸಾಧ್ಯತೆ ಇದೆ ಭೂಕಂಪಗಳಾಗುವ ಸಾಧ್ಯತೆ ಇದೆ" ಎಂದು ಭವಿಷ್ಯ ನುಡಿದಿದ್ದಾರೆ .

ಇದನ್ನೂ ಓದಿಕೊರೋನಾ ರೋಗಕ್ಕೆ ಬೆಂಗಳೂರಿನಲ್ಲಿ 84 ವರ್ಷದ ವೃದ್ಧನ ಮೊದಲ ಬಲಿ: ಗರ್ಭಿಣಿ ಸ್ಥಿತಿ ಗಂಭೀರ, ಜನರಲ್ಲಿ ಆತಂಕ.!

"ಇನ್ನು ಮತೀಯ ಗಲಭೆ ಹೆಚ್ಚಾಗಲಿದೆ. ಯುದ್ಧದ ಭೀತಿ ಮತ್ತೆ ಆರಂಭವಾಗಲಿದೆ. ಅರಸನ ಅರಮನೆಗೆ ಕಾರ್ಮೋಡ ಕವಿದಿತ್ತು. ಜನರಲ್ಲಿ ಅಶಾಂತಿ ಇದೆ. ಕೆಲ ದೇಶಗಳು ಅಳಿದು ಹೋಗಲಿದೆ. ಹೊಸ ದೇಶಗಳ ಉತ್ಪತ್ತಿಯಾಗಲಿದೆ. ಹಲವು ರಾಜಕೀಯ ಮುಖಂಡರಿಗೆ ಸಾವಿದೆ, ನೋವಿದೆ, ಬೆದರಿಕೆ ಇದೆ. ಮುಂದಿನ ಸಂಕ್ರಾತಿಯವರೆಗೆ ರಾಜ್ಯ ಸರಕಾರಕ್ಕೆ ಅಪಾಯವಿಲ್ಲ. ಸಂಕ್ರಾಂತಿ ಬಳಿಕ ಏನಾಗಲಿದೆ ನೋಡಬೇಕು" ಎಂದು ಹಲವಾರು ವಿಷಯಗಳನ್ನು ಕೋಡಿ ಮಠ ಸ್ವಾಮಿ ಹೇಳಿರೋದು ಜನರಲ್ಲಿ ಒಂದು ರೀತಿಯ ಅಂತಕ ಸೃಷ್ಟಿ ಮಾಡಿದೆ.

 

ಇದರಲ್ಲಿ ಎಷ್ಟು ಸತ್ಯವಾಗಬಹುದು ಎನ್ನೋದು ಮುಂದಿನ ದಿನಗಳಲ್ಲಿ ತಿಳಿಯಬೇಕಾಗಿದೆ. ಈಗಾಗಲೇ ಕೊರೋನಾ ಮಹಾಮಾರಿ ಆಕ್ರಮಿಸಿದ್ದು ಯಾವ ರೀತಿಯ ಸ್ವರೂಪ ಪಡೆಯಲಿದೆ ಎಂಬಹುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.