ಮಂಗಳೂರು : ಮೇ 26ರಂದು ನಡೆದ ಸುಭಾಷ್ ಶೆಟ್ಟಿ ಹ*ತ್ಯೆಯ ಪ್ರಕರಣವನ್ನು ಎನ್ಐಎ ಗೆ ಒಪ್ಪಿಸಬೇಕೆಂದು ಆಗ್ರಹಿಸಿ ನಡೆದ ಬೃಹತ್ ಜನಗ್ರಹ ಸಮಾವೇಶದ ವಿರುದ್ಧ ಬಜಪೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ.
ಈ ಸಭೆಗೆ ಅನುಮತಿಯನ್ನು ಪಡೆದಿಲ್ಲ ಮತ್ತು ಸಮಾವೇಶದಲ್ಲಿ ಭಾಗವಹಿಸಿದ ಭಾಷಣಕಾರರು ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ ಎಂಬ ಆರೋಪದಡಿಯಲ್ಲಿ ಪೊಲೀಸರು ಖುದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಜೆಪೆ ಸರ್ಕಲ್ ಬಳಿ ಶಾರದಾ ಮಂಟಪದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಬಜಪೆ ಚಲೋ ಬೃಹತ್ ಪ್ರತಿಭಟನಾ ರ್ಯಾಲಿಯನ್ನು ಆಯೋಜಿಸಿತ್ತು. ಈ ಕಾರ್ಯಕ್ರಮ ಆಯೋಜನೆಯ ಅನುಮತಿಯಾಗಲಿ ಅಥವಾ ಧ್ವನಿವರ್ಧಕಗಳನ್ನು ಬಳಸಲು ಅನುಮತಿ ಪಡೆದುಕೊಂಡಿಲ್ಲ ಎಂಬ ಆರೋಪ ಹೊರಿಸಿದ ಪೊಲೀಸ್ ಇಲಾಖೆ ಬಜ್ಪೆ ಕಾನ್ಸ್ಟೇಬಲ್ ಚಿದಾನಂದ ಕಟೆ ಎಂಬವರು ಮೂಲಕ ದೂರು ಮಾಡಿದ್ದಾರೆ.
ರಾಜ್ಯ ಹೆದ್ದಾರಿ 67ರ ಇಕ್ಕಳಗಳಲ್ಲಿ ಮತ್ತು ಮಧ್ಯದಲ್ಲಿ ನಿಂತು ವಾಹನ ಮತ್ತು ಜನ ಸಂಚಾರಕ್ಕೆ ಅಡಚಣೆ ಮಾಡಿದ್ದಾರೆ. ಬಜೆಪೆ ಬಸ್ ನಿಲ್ದಾಣಕ್ಕೆ ಬರುವ ಮತ್ತು ಪೇಟೆಯಿಂದ ಹೊರಗೆ ಹೋಗುವ ಬಸ್ಸುಗಳನ್ನು ಉದ್ದೇಶಪೂರ್ವಕವಾಗಿ ತಡೆದಿದ್ದಾರೆ ಎಂದು ಕಂಪ್ಲೇಟ್ ನಲ್ಲಿ ನಮೂದಿಸಿದ್ದಾರೆ ಎಂದು ತಿಳಿದುಬಂದಿದೆ.
ಇದು ಒಂದು ರಾಜಕೀಯ ಪ್ರೇರಿತ ದೂರು ದಾಖಲು ಎಂದು ಹಿಂದೂಪರ ಸಂಘಟನೆಯ ನಾಯಕರುಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸುಹಾಸ್ ಬಲಿದಾನ ಯಾವುದೇ ಕಾರಣಕ್ಕೂ ವ್ಯರ್ಥ ಆಗಬಾರದು, ನಾವು ಕಾನೂನು ರೀತಿಯ ಹೋರಾಟ ಮಾಡಿ ಸತ್ಯಾಸತ್ಯತೆ ಹೊರಗಡೆ ಬರುವರೆಗೆ ಹೋರಾಡುತ್ತೇವೆ ಎಂದು ನಾಯಕರುಗಳು ಹೇಳಿದ್ದಾರೆ.