ಮೇ 26 ರ ಸೋಮವಾರದಂದು ಗುಜರಾತಿನ ದಾಹೋದ್ ನಲ್ಲಿ ನಡೆದ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಮತ್ತೊಮ್ಮೆ ಘರ್ಜಿಸಿದ್ದಾರೆ. ಗುಜರಾತಿನಲ್ಲಿ ಆಪರೇಷನ್ ಸಿಂಧೂರ ಬಗ್ಗೆ ಪ್ರಧಾನಿ ಮೋದಿ ಮಾತನಾಡಿ, "ಪಹಲ್ಗಾಮ್ ನಲ್ಲಿ ಭಯೋತ್ಪಾದಕರು ಏನು ಮಾಡಿದರು ಭಾರತ ಮೌನವಾಗಿ ಕುಳಿತುಕೊಳ್ಳಬಹುದೇ?" ಎಂದು ಸಭೆಯನ್ನುದ್ದೇಶಿಸಿ ಪ್ರಶ್ನಿಸಿದ್ದಾರೆ.
ನಮ್ಮ ಸಹೋದರಿಯರ ಸಿಂಧೂರ ಅಳಿಸಿದರೆ....
ಯಾರಾದರೂ ನಮ್ಮ ಸಹೋದರಿಯರ ಸಿಂಧೂರ ಅಳಿಸಲು ಪ್ರಯತ್ನ ಪಟ್ಟರೆ, ಅವರ ಅಳಿಸುವಿಕೆ ಕೂಡ ಖಚಿತ ಎಂದು ಕಠಿಣವಾಗಿ ಹೇಳಿದ್ದಾರೆ. ಇನ್ನು ಮುಂದೆ ಈ ರೀತಿಯ ಕೃತ್ಯ ಎಸಗಲು ಯೋಚಿಸುವವರಿಗೆ ನರಕದ ಮಾರ್ಗ ತೋರಿಸುವುದಾಗಿ ಪರೋಕ್ಷವಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ನೀವು ರೋಟಿ ತಿಂದು ಶಾಂತವಾಗಿ ಬದುಕಿ, ಇಲ್ಲವಾದರೆ ನಮ್ಮ ಬುಲೆಟ್ ಸಿದ್ದವಾಗಿರುತ್ತದೆ : ಪಾಕ್ ಗೆ ಮೋದಿ ಎಚ್ಚರಿಕೆ
ಮೋದಿ ಮೌನವಾಗಿ ಕುಳಿತುಕೊಳ್ಳಬಹುದೇ ಎಂದ ಮಾತಿಗೆ ದಿಟ್ಟ ಉತ್ತರ ನೀಡಿರುವ ಪ್ರಧಾನಿ ಯಾರಾದರೂ ನಮ್ಮ ಸಹೋದರಿಯರ ಸಿಂಧೂರವನ್ನು ಅಳಿಸಿದರೆ ಅವರ ಅಳಿಸುವಿಕೆಯು ಖಚಿತ. ಭಾರತ ಆಪರೇಷನ್ ಸಿಂಧೂರ ಅಡಿಯಲ್ಲಿ ನೂರು ಭಯೋತ್ಪಾದಕರನ್ನು ಕೊಂದಿದೆ ಎಂದು ಎಚ್ಚರಿಕೆ ನೀಡಿದ್ದಾರೆ.