ಮೇ 26 ರ ಸೋಮವಾರದಂದು ಗುಜರಾತಿನ ದಾಹೋದ್ ನಲ್ಲಿ ನಡೆದ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಪಾಕಿಸ್ತಾನಕ್ಕೆ ಒಂದು ಸಂದೇಶವನ್ನು ಕಳುಹಿಸಿದ್ದಾರೆ. ಅವರ ಅರ್ಥದಲ್ಲಿ ನೀವು ಬಾಲ ಮುಚ್ಚಿ ಮಲಗಿ ಎಂಬ ಸಂದೇಶವಿದ್ದಂತೆ ಕಾಣುತ್ತದೆ. ಪ್ರಧಾನಿ ಮೋದಿ ತನ್ನ ಭಾಷಣದಲ್ಲಿ "ನೀವು ರೋಟಿ ತಿಂದು ಶಾಂತವಾಗಿ ಬದುಕಿ. ಇಲ್ಲವಾದರೆ ನಮ್ಮ ಬುಲೆಟ್ ಸಿದ್ದವಾಗಿರುತ್ತದೆ" ಎಂದು ತಮ್ಮದೇ ದಾಟಿಯಲ್ಲಿ ಎಚ್ಚರಿಕೆಯ ಕರೆಯನ್ನು ಕೊಟ್ಟಿದ್ದಾರೆ.
ಭಾರತ ಪ್ರವಾಸೋದ್ಯಮವನ್ನು ನೆಚ್ಚಿಕೊಂಡಿದೆ ಆದರೆ ಪಾಕಿಸ್ತಾನ ಭಯೋತ್ಪಾದಕತೆಯನ್ನು ಪ್ರವಾಸೋದ್ಯಮವೆಂದು ಪರಿಗಣಿಸುತ್ತಿದೆ, ಇದು ಜಗತ್ತಿಗೆ ದೊಡ್ಡ ಅಪಾಯ ಎಂದು ಹೇಳುವ ಮೂಲಕ ಪಾಕಿಸ್ತಾನದ ವಿರುದ್ಧ ಘರ್ಜಿಸಿದ್ದಾರೆ.
ಇದನ್ನೂ ಓದಿ : ನಮ್ಮ ಸಹೋದರಿಯರ ಸಿಂಧೂರ ಯಾರು ಅಳಿಸುತ್ತಾರೋ ಅವರಿಗೆ ಉಳಿಗಾಲವಿಲ್ಲ - ಪ್ರಧಾನಿ ಮೋದಿ
ಪಾಕಿಸ್ತಾನದ ವಾಯುನೆಲೆಗಳು ಇನ್ನೂ ಐಸಿಯುನಲ್ಲಿವೆ
ಪ್ರಧಾನಿ ಮೋದಿ ಮುಂದಕ್ಕೆ ಮಾತನಾಡಿ, "ಆಪರೇಷನ್ ಸಿಂಧೂರ್ ನ ಪ್ರಭಾವದಿಂದ ಪಾಕ್ ವಾಯುನೆಲೆಗಳು ಇನ್ನೂ ಐಸಿಯುನಲ್ಲಿವೆ" ಎಂದು ಮೋದಿ ಹೇಳಿದ್ದಾರೆ. ತಮ್ಮ ಸೇನೆಯ ಪ್ರತಿದಾಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಪಾಕ್ ಅರಿತುಕೊಂಡಿದೆ ಎಂದರು. ಭಾರತೀಯ ಪಡೆಗಳ ಶೌರ್ಯ ನೋಡಿ ಪಾಕಿಸ್ತಾನ ಬೆಚ್ಚಿ ಬಿದ್ದಿದೆ. ತಮ್ಮ ಗುರಿ ಉಗ್ರರು ಮಾತ್ರ ಎಂದು ಗುಡುಗಿದ್ದಾರೆ