ಬಂಟ್ವಾಳ : ನಿನ್ನೆ ಬಂಟ್ವಾಳದಲ್ಲಿ ನಡೆದ ಕೊಲೆ ಮತ್ತು ಕೊ*ಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ 15 ಜನರ ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಬಂಟ್ವಾಳದ ಕೊಳತಮಜಲ್ ನಲ್ಲಿ ಪಿಕಪ್ ಡ್ರೈವರ್ ಅಬ್ದುಲ್ ರಹೀಮ್ (32) ಮತ್ತು ಜೊತೆಗಿದ್ದ ಕಲಂದರ್ ಶಾಫಿ ಮೇಲೆ ತಲವಾರಿನಿಂದ ಮಾರಣಾಂತಿಕ ಹ*ಲ್ಲೆ ನಡೆದಿದ್ದು, ಅಬ್ದುಲ್ ರಹೀಮ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡ ಕಲಂದರ್ ಶಾಫಿಗೆ ಆಸ್ಪತ್ರೆಯಲ್ಲಿ ಚಿಕಿಸ್ಥೆ ನಡೆಯುತ್ತಿದೆ.
ಈ ಘಟನೆಯ ದಿನ ಅಬ್ದುಲ್ ರಹೀಮ್ ಹೊಳೆಯೊಂದರಿಂದ ತನ್ನ ಪಿಕಪ್ ನಲ್ಲಿ ಮರಳು ತುಂಬಿಸಿ ಕುರಿಯಲ್ ಗ್ರಾಮದ ಇರಾಕೋಡಿಯ ಒಂದು ಮನೆಗೆ ತಲುಪಿಸಿದ್ದರು. ಆ ಸಂದರ್ಭದಲ್ಲಿ 15 ಜನರ ಗುಂಪು ಅವರ ಮೇಲೆ ಹಠಾತನೆ ದಾಳಿ ಮಾಡಿದೆ ಎಂದು ಕಂಪ್ಲೇಂಟ್ ನಲ್ಲಿ ತಿಳಿಸಲಾಗಿದೆ ಎಂದು ವರದಿಯಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯಲ್ಲಿ ಗಾಯಗೊಂಡ ಶಾಫಿ ಹೇಳಿಕೆಯ ಆದರದ ಮೇಲೆ ಮೊಹಮ್ಮದ್ ನಿಸಾರ್ ಎಂಬವರು ಪ್ರಕರಣ ದಾಖಲಿಸಿದ್ದು, ಹಲ್ಲೆಕೋರರು ಅಬ್ದುಲ್ ರಹೀಮ್ ರವರನ್ನು ಡ್ರೈವರ್ ಸೀಟ್ ನಿಂದ ಕೆಳಗೆ ಇಳಿಸಿ ಕತ್ತಿಗಳು, ಚಾಕುಗಳು ಮತ್ತು ರಾಡ್ ಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಸಂದರ್ಭದಲ್ಲಿ ಶಾಫಿ ಎಂಬವರು ಮಧ್ಯೆ ಪ್ರವೇಶಿಸಲು ಪ್ರಯತ್ನ ಪಟ್ಟಾಗ ಅವರ ಎದೆ, ಬೆನ್ನು, ಕೈಗಳಿಗೆ ಕೂಡ ಹೊಡೆದಿದ್ದಾರೆ, ನಂತರ ಸ್ಥಳೀಯರು ಎಚ್ಚರಿಕೆ ನೀಡಲು ಪ್ರಾರಂಭಿಸಿದ್ದಾಗ ತಮ್ಮ ಆಯುಧಗಳನ್ನು ಹಿಡಿದುಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ತಿಳಿಸಿದ್ದಾರೆ. ಒಟ್ಟು 15 ಜನರ ತಂಡದಲ್ಲಿ ಇಬ್ಬರು ಪರಿಚಯಸ್ಥರಾದ ದೀಪಕ್ ಮತ್ತು ಸುಮಿತ್ ಪಾಲ್ಗೊಂಡಿದ್ದರು ಎಂದು ಗಾಯಗೊಂಡ ಶಾಫಿ ದೂರುದಾರದ ಮೊಹಮ್ಮದ್ ನಿಸಾರ್ ಗೆ ತಿಳಿಸಿದ್ದು, ಅದೇ ರೀತಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಮುಂದುವರಿಯುತ್ತಿದೆ.
ಬಂಟ್ವಾಳದಲ್ಲಿ ಪಿಕಪ್ ಚಾಲಕನ ಕೊಚ್ಚಿ ಬರ್ಬರ ಹ*ತ್ಯೆ
ಮೇ 27 ರ ಸಂಜೆ 6 ಗಂಟೆಯಿಂದ, ಮೇ 30 ಸಂಜೆ 6 ಗಂಟೆವರೆಗೆ ಬಂಟ್ವಾಳ ಸುತ್ತಮುತ್ತಲಿನ ಒಟ್ಟು 5 ತಾಲೂಕುಗಳಿಗೆ ನಿಷೇದಾಜ್ಞೆ ಜಾರಿ ಮಾಡಲಾಗಿದೆ. ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಕಡಬ ಮತ್ತು ಸುಳ್ಯ ತಾಲೂಕುಗಳಲ್ಲಿ ನಿಷೇದಾಜ್ಞೆ ಜಾರಿಯಲಿರುವುದರಿಂದ ಸಾರ್ವಜನಿಕರು ಸಹಕರಿಸಬೇಕೆಂದು ಕೇಳಿಕೊಳ್ಳಲಾಗಿದೆ.