ತಮಿಳು ನಟ ಕಮಲ್ ಹಾಸನ್ 'ತಮಿಳಿನಿಂದ ಕನ್ನಡ ಹುಟ್ಟಿತ್ತು' ಎಂಬ ಹೇಳಿಕೆ ರಾಜ್ಯದ್ಯಾದಂತ ಭಾರಿ ಗೊಂದಲವನ್ನು ಸೃಷ್ಟಿ ಮಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಕಮಲ್ ಹಾಸನ್ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿದ್ದಾರೆ. ಕನ್ನಡ ಪರ ಸಂಘಟನೆಗಳು ಕಮಲ್ ಹಾಸನ್ ಗೆ ಕ್ಷಮೆ ಕೇಳಲು ಕೇಳಿಕೊಂಡರು, 'ನನ್ನಿಂದ ತಪ್ಪು ಆಗಿಲ್ಲ ಆದ್ದರಿಂದ ಕ್ಷಮೆ ಕೇಳಲ್ಲ' ಎಂಬ ಮೊಂಡುತನದ ನಡವಳಿಕೆ ಕನ್ನಡ ಪರ ಸಂಘಟನೆ ಮತ್ತು ಸ್ಯಾಂಡಲ್ ವುಡ್ ನಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ತಪ್ಪೊಪ್ಪದ ಕಮಲ್ ಹಾಸನ್ : 'ಕನ್ನಡ ತಮಿಳಿನಿಂದ' ವಿವಾದದ ಹೇಳಿಕೆ, ರಾಜ್ಯಾದ್ಯಂತ ಆಕ್ರೋಶ!
ಚೆನ್ನೈ ನಲ್ಲಿ ನಡೆದ 'ಥಗ್ ಲೈಫ್' ಸಿನಿಮಾದ ಧ್ವನಿಸುರುಳಿ ಕಾರ್ಯಕ್ರಮದಲ್ಲಿ ಕಮಲ್ ಹಾಸನ್ ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಕಾರ್ಯಕ್ರಮದಲ್ಲಿ ಕನ್ನಡ ನಟ ಶಿವರಾಜ್ ಕುಮಾರ್ ಕೂಡ ಭಾಗವಹಿಸಿದ್ದರು. ಶಿವರಾಜ್ ಕುಮಾರ್ ಕಮಲ್ ಹಾಸನ್ ಹೇಳಿಕೆಯನ್ನು ಖಂಡಿಸದೆ ಅದು ಕಮಲ್ ರವರ ವೈಯಕ್ತಿಕ ಅಭಿಪ್ರಾಯ, ನಾವು ವಿಷಯವನ್ನು ದೊಡ್ಡದು ಮಾಡಬಾರದು ಎಂಬ ಹೇಳಿಕೆ ಕೂಡ ಕನ್ನಡಿಗರನ್ನು ಕೆಂಡಾಮಂಡಲ ಮಾಡಿದೆ.
ಪ್ರತಿಭಟನೆ ನಡೆದರೆ ಕರ್ನಾಟಕದಲ್ಲಿ ಶಾಲಾ ಕಾಲೇಜುಗಳಿಗೆ ರಜೆ ?
ಇದೀಗ ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ ವಿರುದ್ಧ ಕನ್ನಡ ಪರ ಸಂಘಟನೆಗಳು ದೊಡ್ಡ ಮಟ್ಟದ ಹೋರಾಟಕ್ಕೆ ಸಿದ್ದರಾಗಿದ್ದಾರೆ. ಕನ್ನಡಿಗರನ್ನು ಮುಟ್ಟಿದರೆ ಸುಮ್ಮನೆ ಇರಲು ಸಾಧ್ಯವಿಲ್ಲ ಎಂಬ ಎಚ್ಚರಿಕೆ ಬಹಳ ಬಾರಿ ನೀಡಿದರು ಕ್ಯಾರೇ ಮಾಡದ ಕಮಲ್ ನಡವಳಿಕೆಗೆ ರಾಜ್ಯದಾದ್ಯಂತ ಹೋರಾಟ ಮೂಲಕ ಪ್ರತಿಭಟನೆಗೆ ಸಜ್ಜಾಗಿದೆ.
ಈ ಕಾರಣದಿಂದಾಗಿ ಕರ್ನಾಟಕ ಬಂದ್ ಗೆ ಕರೆ ನೀಡಲು ಈ ಸಂಘಟನೆಗಳು ನಿರ್ಧರಿಸಿದ್ದು, ಕರ್ನಾಟಕ ಬಂದ್ ಗೆ ದಿನಾಂಕ ಫಿಕ್ಸ್ ಮಾಡಲಿದ್ದಾರೆ. ಸ್ಯಾಂಡಲ್ ವುಡ್ ನ ಸಿನಿಮಾ ಸಂಘಟನೆಗಳು ಕೂಡ ಕನ್ನಡ ಪರ ಸಂಘಟನೆಗಳ ಕೈ ಜೋಡಿಸಲಿದ್ದಾರೆ ಎಂಬ ವಿಚಾರ ತಿಳಿದು ಬಂದಿದೆ. ಒಂದು ವೇಳೆ ಕರ್ನಾಟಕ ಬಂದ್ ಗೆ ಕರೆ ಕೊಟ್ಟರೆ ಜೂನ್ 3 ರಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.