ಬೆಂಗಳೂರಿನಲ್ಲಿ ನಡೆಯುವ RCB ಅಭಿನಂದನಾ ಕಾರ್ಯಕ್ರಮಕ್ಕೆ ಜನ ಸಾಗರ ಹರಿದು ಬಂದಿದೆ. ವಿಧಾನಸೌಧ ಮತ್ತು ಚಿನ್ನ ಸ್ವಾಮಿ ಕ್ರೀಡಾಂಗಣದ ಬಳಿ ಸಾವಿರಾರು ಜನ ಸೇರಿದ್ದಾರೆ.
ಆದರೆ ದುರದೃಷ್ಟವೆಂದರೆ, 7 ಜನ ಕಾಲ್ತುಳಿತಕ್ಕೆ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ ಮತ್ತು 90ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಅದರಲ್ಲಿ ಇಬ್ಬರ ಪರಿಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಅಸ್ವಸ್ಥರನ್ನು ಬೌರಿಂಗ್ ಆಸ್ಪತ್ರೆ ಸೇರಿಸಲಾಗಿದೆ.
ಚಾಂಪಿಯನ್ RCB ಆಟಗಾರನ್ನು ನೋಡಿ ಕಣ್ತುಂಬಿಸಲು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಚಿನ್ನ ಸ್ವಾಮಿ ಕ್ರೀಡಾಂಗಣ ಬಳಿ ತೆರಳಿದ್ದಾರೆ.
ಐಪಿಎಲ್(IPL) 2025 - ತಂಡಗಳಿಗೆ ಮತ್ತು ಆಟಗಾರರಿಗೆ ಎಷ್ಟೆಷ್ಟು ಹಣ ಸಿಕ್ಕಿದೆ ಎಂದು ತಿಳಿಯಬೇಕೇ? ಇಲ್ಲಿದೆ ವಿವರ